alex Certify ಪ್ರಧಾನಿ ಮೋದಿಯನ್ನು ʼಹೆಬ್ಬೆಟ್ಟು ಗಿರಾಕಿʼಯೆಂದು ಪೇಚಿಗೆ ಸಿಲುಕಿದ ರಾಜ್ಯ ಕಾಂಗ್ರೆಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಯನ್ನು ʼಹೆಬ್ಬೆಟ್ಟು ಗಿರಾಕಿʼಯೆಂದು ಪೇಚಿಗೆ ಸಿಲುಕಿದ ರಾಜ್ಯ ಕಾಂಗ್ರೆಸ್​..!

ಪ್ರಧಾನಿ ಮೋದಿ ವಿರುದ್ಧ ಮಾಡಲಾಗಿದ್ದ ಟ್ವೀಟ್​ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್​ ಅವಹೇಳನಕಾರಿ ಟ್ವೀಟ್​ನ್ನು ಅಳಿಸಿ ಹಾಕಿದೆ. ಈ ಟ್ವೀಟ್​​ನಲ್ಲಿ ರಾಜ್ಯ ಕಾಂಗ್ರೆಸ್​ ಪ್ರಧಾನಿ ಮೋದಿಯನ್ನು ಅನಕ್ಷರಸ್ಥ ಎಂಬಂತೆ ಬಿಂಬಿಸಿತ್ತು.

ಕಾಂಗ್ರೆಸ್​ ಶಾಲೆಗಳನ್ನು ಕಟ್ಟಿಸಿತ್ತು. ಆದರೂ ಮೋದಿ ಓದಲಿಲ್ಲ. ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು. ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುರನ್ನಾಗಿ ಮಾಡುತ್ತಿದ್ದಾರೆ. ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿತ್ತು.

ಪ್ರಧಾನಿ ಮೋದಿಯವರ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದ ಈ ಟ್ವೀಟ್​​ ಬಿಜೆಪಿ ಹಾಗೂ ಕಾಂಗ್ರೆಸ್ಸಿಗರ ನಡುವೆ ದೊಡ್ಡ ಮಾತಿನ ಯುದ್ಧವನ್ನೇ ನಡೆಸಿ ಬಿಟ್ಟಿದೆ.
ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಬಿಜೆಪಿ ಕರ್ನಾಟಕ ವಕ್ತಾರೆ ಮಾಳವಿಕಾ ಅವಿನಾಶ್​, ಇಷ್ಟು ಕೆಳಮಟ್ಟಕ್ಕೆ ಇಳಿಯಲು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ. ಈ ಟ್ವೀಟ್​ ಪ್ರತಿಕ್ರಿಯೆಗೂ ಅರ್ಹವಾಗಿಲ್ಲ ಎಂದು ಜರಿದಿದ್ದರು.

ಟ್ವೀಟ್​ ಅಳಿಸಿದ ಬಳಿಕ ಮಾತನಾಡಿದ ಕರ್ನಾಟಕ ಕಾಂಗ್ರೆಸ್​ ವಕ್ತಾರೆ ಲಾವಣ್ಯ ಬಲ್ಲಾಳ್​, ಈ ರೀತಿಯ ಟ್ವೀಟ್​ ಪೋಸ್ಟ್​ ಆಗಿರುವುದು ದುರದೃಷ್ಟಕರ ಹಾಗೂ ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಈ ಸಂಬಂಧ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ಟ್ವೀಟ್​ ಡಿಲೀಟ್​ ಮಾಡಿದ ಬಳಿಕ ತಮ್ಮ ಅಧಿಕೃತ ಖಾತೆಯ ಮೂಲಕ ಟ್ವೀಟಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ನಾನು ರಾಜಕಾರಣದಲ್ಲಿ ಎಂದಿಗೂ ನಾಗರಿಕ ಹಾಗೂ ಸಂಸದೀಯ ಭಾಷೆಗೆ ಮಹತ್ವ ನೀಡಿದ್ದೇನೆ. ಅನುಭವಿ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರು ಕರ್ನಾಟಕ ಕಾಂಗ್ರೆಸ್​ನ ಅಧಿಕೃತ ಟ್ವಿಟರ್​ ಮೂಲಕ ಈ ರೀತಿಯ ಟ್ವೀಟ್​ ಮಾಡಿರುವುದು ದುರದೃಷ್ಟಕರ. ಈ ಟ್ವೀಟ್​ನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಬರೆದಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...