alex Certify ಅನೈತಿಕ ಸಂಬಂಧದ ಅನುಮಾನಕ್ಕೆ 17 ವರ್ಷದ ಬಾಲಕನ ಹತ್ಯೆ; ತನಿಖೆ ದಿಕ್ಕು ತಪ್ಪಿಸಲು ʼಅಲ್ಲಾ ಹೋ ಅಕ್ಬರ್‌ʼ ಎಂದು ಬರೆದಿದ್ದ ಆರೋಪಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೈತಿಕ ಸಂಬಂಧದ ಅನುಮಾನಕ್ಕೆ 17 ವರ್ಷದ ಬಾಲಕನ ಹತ್ಯೆ; ತನಿಖೆ ದಿಕ್ಕು ತಪ್ಪಿಸಲು ʼಅಲ್ಲಾ ಹೋ ಅಕ್ಬರ್‌ʼ ಎಂದು ಬರೆದಿದ್ದ ಆರೋಪಿ…!

17 ವರ್ಷದ ಬಾಲಕನನ್ನು ಆತನ ಶಿಕ್ಷಕಿಯ ಬಾಯ್​ಫ್ರೆಂಡ್​​ ಕೊಲೆ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದೆ. ಈ ಘಟನೆಯು ಕಿಡ್ನಾಪ್​ ಕೇಸ್​ನಂತೆ ಕಾಣಬೇಕು ಎಂಬ ದುರುದ್ದೇಶದಿಂದ ಆರೋಪಿಯು ಮೃತ ಬಾಲಕನ ಮನೆಗೆ ಬೆದರಿಕೆ ಪತ್ರವನ್ನೂ ಕಳಿಸಿದ್ದ ಎನ್ನಲಾಗಿದೆ. ಆರೋಪಿ ಪ್ರಭಾತ್​ ಶುಕ್ಲಾ ನಿವಾಸದಲ್ಲಿ 10ನೇ ತರಗತಿ ವಿದ್ಯಾರ್ಥಿಯ ಶವ ಪತ್ತೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ಬಾಲಕನ ಟ್ಯೂಷನ್​ ಶಿಕ್ಷಕಿ ರಚಿತಾ ಹಾಗೂ ಆಕೆಯ ಗೆಳೆಯ ಪ್ರಭಾತ್​ ಶುಕ್ಲಾರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆಯಲ್ಲಿ ಆರ್ಯನ್​ ಎಂಬಾತನ ಬಂಧನ ಕೂಡ ಆಗಿದೆ. ಆರೋಪಿಯು ತನ್ನ ಗರ್ಲ್​ಫ್ರೆಂಡ್​ ಜೊತೆಯಲ್ಲಿ ಮೃತ ಬಾಲಕ ದೈಹಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇಲೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಕೊಲೆಯಾದ ಬಾಲಕ ಕಾನ್ಪುರದ ಪ್ರಮುಖ ಬಟ್ಟೆ ಅಂಗಡಿ ಮಾಲೀಕನ ಪುತ್ರ ಎನ್ನಲಾಗಿದೆ. ಈತ ಟ್ಯುಷನ್​ ಪಡೆಯಲು ಸ್ಕೂಟರ್​ನಲ್ಲಿ ಮನೆಯಿಂದ ಹೊರಟವನು ಮನೆಗೆ ವಾಪಸ್​ ಬಂದಿರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸ್ಕೂಟರ್​ನಲ್ಲಿ ಬಂದ ವ್ಯಕ್ತಿಯೊಬ್ಬ ನಿಮ್ಮ ಮಗ ಸುರಕ್ಷಿತವಾಗಿ ನಿಮಗೆ ಸಿಗಬೇಕು ಅಂದ್ರೆ 30 ಲಕ್ಷ ರೂಪಾಯಿ ನೀಡಬೇಕು ಎಂಬ ಪತ್ರವನ್ನು ನೀಡಿದ್ದ. ಅಲ್ಲದೇ ಈ ಪ್ರಕರಣದ ದಾರಿಯನ್ನು ತಪ್ಪಿಸಲು ಆ ಪತ್ರದ ಮೇಲೆ ʼಅಲ್ಲಾ ಹು ಅಕ್ಬರ್ʼ​ ಹಾಗೂ ಅಲ್ಲಾನ ಮೇಲೆ ವಿಶ್ವಾಸ ಇಡಿ ಎಂದೂ ಸಹ ಬರೆಯಲಾಗಿತ್ತು.

ಸಿಸಿಟಿವಿ ಫೂಟೇಜ್​ ಪರಿಶೀಲನೆ ಮಾಡಿದ ಬಳಿಕ ಬಾಲಕ ಶುಕ್ಲಾನೊಂದಿಗೆ ಸ್ಟೋರ್​ ರೂಮ್​ ಒಳಗೆ ಹೋಗುತ್ತಿರೋದನ್ನು ಕಾಣಬಹುದಾಗಿದೆ. ಶಿಕ್ಷಕಿಯೇ ನಿನ್ನನ್ನು ಒಳಗೆ ಕರೆಯುತ್ತಿದ್ದಾಳೆ ಎಂದು ನಂಬಿಸಿ ಬಾಲಕನನ್ನು ಒಳಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಶುಕ್ಲಾ ಹಾಗೂ ಕೊಲೆಯಾದ ಬಾಲಕ ಇಬ್ಬರೂ ಒಟ್ಟಿಗೆ ಸ್ಟೋರ್​ ರೂಮ್​ ಒಳಗೆ ಪ್ರವೇಶಿಸಿದ್ದರು. ಆದರೆ ಶುಕ್ಲಾ ಮಾತ್ರ ಕೋಣೆಯಿಂದ ಹೊರಬಂದಿದ್ದಾನೆ. ಆದರೆ ಬಾಲಕ ಹೊರಬಂದಿರಲಿಲ್ಲ. ಇದಾದ ಬಳಿಕ ಆರೋಪಿ ಶುಕ್ಲಾ ಬಟ್ಟೆ ಬದಲಾಯಿಸಿ ಸ್ಕೂಟರ್​ನಲ್ಲಿ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಶಿಕ್ಷಕಿ ರಚಿತಾ ಕೂಡ ಆರೋಪದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾಳೆ ಕೂಡ ಎನ್ನಲಾಗಿದೆ. ಇನ್ನು ಬೆದರಿಕೆ ಪತ್ರದಲ್ಲಿರುವ ಕೈ ಬರಹವು ತನ್ನ ಗೆಳೆಯ ಪ್ರಭಾತ್​ ಶುಕ್ಲಾನದ್ದು ಎಂದು ರಚಿತಾ ಒಪ್ಪಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...