alex Certify BIG NEWS: ಕಾಣಿಯೂರು ಕಾರು ಅಪಘಾತ ಪ್ರಕರಣ; ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಣಿಯೂರು ಕಾರು ಅಪಘಾತ ಪ್ರಕರಣ; ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ

ದಕ್ಷಿಣ ಕನ್ನಡ: ಕಾಣಿಯೂರು ಬಳಿ ಕಾರು ಅಪಘಾತ ಸಂಭವಿಸಿ, ಸೇತುವೆಯಿಂದ ಕಾರು ನದಿಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಬಳಿಕ ಇದೀಗ ಇಬ್ಬರ ಶವ ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಬ್ರಿಡ್ಜ್ ಬಳಿ ಭಾರಿ ಮಳೆಯ ನಡುವೆಯೇ ವೇಗವಾಗಿ ಬಂದ ಕಾರು ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಹಾರಿ ಬಿದ್ದಿತ್ತು. ಮಳೆ ಆರ್ಭಟಕ್ಕೆ ತುಂಬಿ ಹರಿಯುತ್ತಿದ್ದ ನದಿಯ ನೀರಿನ ರಭಸಕ್ಕೆ ವ್ಯಕ್ತಿಗಳ ಸಮೇತ ಕಾರು ಕೊಚ್ಚಿ ಹೋಗಿತ್ತು.

ಕಳೆದ ಮೂರು ದಿನಗಳಿಂದ ನೀರಿಗೆ ಬಿದ್ದ ಕಾರಿನಲ್ಲಿದ್ದವರ ಪತ್ತೆಗಾಗಿ ಎನ್ ಡಿ ಆರ್ ಎಫ್ ತಂಡ ಶೋಧ ಕಾರ್ಯ ನಡೆಸಿತ್ತು. ನಿನ್ನೆ ಕಾರು ಪತ್ತೆಯಾಗಿತ್ತು. ಆದರೆ ಕಾರಿನಲ್ಲಿದ್ದವರ ಸುಳಿವು ಇರಲಿಲ್ಲ. ಇದೀಗ ಕಾರು ನದಿಗೆ ಬಿದ್ದ ಜಾಗದಿಂದ ಸುಮಾರು 250 ಮೀಟರ್ ದೂರದಲ್ಲಿ ಕಲ್ಲುಗಳ ಮಧ್ಯೆ ಇಬ್ಬರ ಶವ ಪತ್ತೆಯಾಗಿದೆ.

ಮೃತರಲ್ಲಿ ಓರ್ವ ಧನುಷ್ ಎಂದು ಗುರುತಿಸಲಾಗಿದ್ದು, ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಶವವನ್ನು ನೀರಿನಿಂದ ಹೊರ ತೆಗೆಯುವ ಕಾರ್ಯಾಚಾರಣೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...