alex Certify ಕಂಗನಾ ರಣಾವತ್​​ಗೆ ದೆಹಲಿ ವಿಧಾನಸಭೆಯಿಂದ ನೋಟಿಸ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾ ರಣಾವತ್​​ಗೆ ದೆಹಲಿ ವಿಧಾನಸಭೆಯಿಂದ ನೋಟಿಸ್..​..!

ಸಿಖ್ಖರ ವಿರುದ್ಧ ಹೇಳಿಕೆ ನೀಡಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​​ಗೆ ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿ ಸಮನ್ಸ್​ ನೀಡಿದೆ. ಆಮ್​ ಆದ್ಮಿ ಪಕ್ಷದ ನಾಯಕ ರಾಘವ್​ ಚಡ್ಡಾ ನೇತೃತ್ವದ ಸಮಿತಿಯ ಎದುರು ಡಿಸೆಂಬರ್​ 6ರ ಒಳಗಾಗಿ ಹಾಜರಾಗುವಂತೆ ಕಂಗನಾ ರನೌತ್​ಗೆ ಸೂಚನೆ ನೀಡಲಾಗಿದೆ.

ನವೆಂಬರ್​ 20ರಂದು ನಿಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ನೀವೇ ಪೋಸ್ಟ್​ ಮಾಡಿರುವ ವಿಚಾರಗಳು ಆಕ್ಷೇಪಾರ್ಹವಾಗಿದೆ ಎಂದು ಅನೇಕ ದೂರುಗಳನ್ನು ಸಮಿತಿಯು ಸ್ವೀಕರಿಸಿದೆ ಎಂದು ಸಮಿತಿಯ ಉಪಕಾರ್ಯದರ್ಶಿಯು ಕಂಗನಾ ರಣೌತ್​​ಗೆ ನೋಟಿಸ್​ ನೀಡಿದ್ದಾರೆ.

ಸಿಖ್ಖರನ್ನು ಖಲಿಸ್ತಾನಿ ಭಯೋತ್ಪಾದಕರು ಎಂದು ಬಣ್ಣಿಸುವ ಮೂಲಕ ಇಡೀ ಸಿಖ್​ ಸಮುದಾಯಕ್ಕೆ ಅವಮಾನವನ್ನು ಉಂಟು ಮಾಡಿದ್ದೀರಿ ಎಂದು ಸಮನ್ಸ್​​ನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಕ್ಕಾಗಿ ಮುಂಬೈನಲ್ಲಿ ಸಿಖ್ಖರು ಪೊಲೀಸ್​ ಠಾಣೆಗೆ ದೂರು ನೀಡಿದ್ದು ಈ ಸಂಬಂಧ ನಟಿ ಕಂಗನಾ ರಣಾವತ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಮುಂಬೈನ ಉದ್ಯಮಿ, ದೆಹಲಿ ಸಿಖ್​ ಗುರುದ್ವಾರ ನಿರ್ವಹಣಾ ಸಮಿತಿ ನಾಯಕ ಹಾಗೂ ಶಿರೋಮಣಿ ಅಕಾಲಿದಳವು ಕಂಗನಾ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಉದ್ದೇಶಪೂರ್ವಕವಾಗಿ ಕೃಷಿ ಕಾನೂನುಗಳ ವಿರುದ್ಧ ರೈತರು ವರ್ಷವಿಡೀ ನಡೆಸಿದ ಪ್ರತಿಭಟನೆಯನ್ನು ಖಲಿಸ್ತಾನಿ ಚಳವಳಿ ಎಂದು ವ್ಯಾಖ್ಯಾನಿಸಿದ್ದಾರೆ ಎಂದು ಕಂಗನಾ ವಿರುದ್ಧ ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...