alex Certify ‘ಹಿಂದುಗಳಿಗೆ ಮಾತ್ರ ಉದ್ಯೋಗ’ವೆಂದ ಕಾಲೇಜು: ಜಾಹೀರಾತು ನೋಡಿ ಕೆಂಡಾಮಂಡಲಗೊಂಡ ಸಂಘಟನೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಿಂದುಗಳಿಗೆ ಮಾತ್ರ ಉದ್ಯೋಗ’ವೆಂದ ಕಾಲೇಜು: ಜಾಹೀರಾತು ನೋಡಿ ಕೆಂಡಾಮಂಡಲಗೊಂಡ ಸಂಘಟನೆಗಳು

ಕೊಲತ್ತೂರು: ತಮಿಳುನಾಡಿನಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ (ಎಚ್ & ಸಿಇ) ತನ್ನ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ಹಿಂದೂಗಳಿಗೆ ಮಾತ್ರ ಆಹ್ವಾನಿಸುವ ಜಾಹೀರಾತು ಪ್ರಕಟಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ….! 31 ಕೋಟಿ ಜೊತೆ ಇದನ್ನೂ ಕಳೆದುಕೊಂಡ ಜೋಡಿ

ಕೊಲತ್ತೂರಿನಲ್ಲಿರುವ ಅರುಳ್ಮಿಗ ಕಪಾಲೀಶ್ವರರ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿವಿಧ ಬೋಧನೆ ಮತ್ತು ಬೋಧಕೇತರ ಹುದ್ದೆಗಳಿಗೆ ಅಕ್ಟೋಬರ್ 13 ರಂದು ಅರ್ಜಿ ಆಹ್ವಾನಿಸಿ, ಜಾಹೀರಾತು ಪ್ರಕಟಿಸಿತ್ತು. ಪ್ರಕಟವಾದ ಜಾಹೀರಾತಿನಲ್ಲಿ ಈ ಹುದ್ದೆಗಳು ‘ಹಿಂದುಗಳಿಗೆ ಮಾತ್ರ’ ಎಂದು ಹೇಳಲಾಗಿದೆ. ಇದು ರಾಜ್ಯದಲ್ಲಿ ಭಾರಿ ಗದ್ದಲ ಸೃಷ್ಟಿಸಿದ್ದು, ಹಲವಾರು ಸಂಘಟನೆಗಳು ಕಿಡಿಕಾರಿದೆ.

BIG NEWS: ಕಮಲ ಪಡೆಗಳ ವಿರುದ್ಧ ಸಿದ್ದು ವಾಗ್ಬಾಣ; ದಮ್ ಇದ್ದರೆ ನೀವು ಮಾಡಿದ ಕೆಲಸದ ಪಟ್ಟಿ ಕೊಡಿ; ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ ಸಿದ್ದರಾಮಯ್ಯ

ಹೆಚ್ಆರ್ ಮತ್ತು ಸಿಇ ವಿಭಾಗವು 2021-22 ರಿಂದ ಕೊಳತ್ತೂರಿನಲ್ಲಿ ಕಪಾಲೀಶ್ವರರ್ ಕಾಲೇಜು ಸೇರಿದಂತೆ ನಾಲ್ಕು ಹೊಸ ಕಲಾ ಮತ್ತು ವಿಜ್ಞಾನ ಕಾಲೇಜುಗಳನ್ನು ತೆರೆಯುತ್ತಿದೆ. ಜಾಹೀರಾತಿನಲ್ಲಿ, ಬಿಕಾಂ, ಬಿಬಿಎ, ಬಿಎಸ್ಸಿ ಕಂಪ್ಯೂಟರ್ ಸೈನ್ಸ್, ಬಿಸಿಎ, ತಮಿಳು, ಇಂಗ್ಲಿಷ್, ಗಣಿತ ಕೋರ್ಸ್‌ಗಳನ್ನು ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಗ್ರಂಥಪಾಲಕ ಹುದ್ದೆಗಳಿಗೆ ಬೋಧಿಸಲು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ. ಕಚೇರಿ ಸಹಾಯಕ, ಕಿರಿಯ ಸಹಾಯಕ, ಕಾವಲುಗಾರ ಮತ್ತು ಸ್ವೀಪರ್ ಸೇರಿದಂತೆ ಬೋಧಕೇತರ ಸಿಬ್ಬಂದಿಯ ಹುದ್ದೆಗಳಿಗೆ ಕರೆಯಲಾಗಿದ್ದ ಅರ್ಜಿಯು, ಹಿಂದೂಗಳಿಗೆ ಮಾತ್ರ ಎಂದು ಜಾಹೀರಾತಿನಲ್ಲಿ ತಿಳಿಸಿರುವುದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

BIG NEWS: ನೀವು ಓಡಾಡಲು ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ…? ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು

ಸರ್ಕಾರದಿಂದ ನಡೆಸಲ್ಪಡುವ ಇಲಾಖೆಯು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಮತ್ತು ಇತರ ಧರ್ಮದ ಅಭ್ಯರ್ಥಿಗಳನ್ನು ಅನರ್ಹರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಪಾಂಡ್ಯನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...