ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಉಪತಳಿ ಜೆಎನ್ 1 ಸ್ಪೋಟವಾಗಿದ್ದು, ಮತ್ತೆ 165 ಪ್ರಕರಣಗಳು ಪತ್ತೆಯಾಗಿದೆ.
ಹೌದು, ರಾಜ್ಯದಲ್ಲಿ ಕಳೆದ ನಾಲ್ಕು ವಾರಗಳಿಂದ ಕೊರೊನಾ ಸೋಂಕು ಭಾರಿ ಏರಿಕೆಯಾಗುತ್ತಿದ್ದು, ಇದಕ್ಕೆ ಜೆ ಎನ್ 1 ಉಪತಳಿಯೇ ಕಾರಣ ಎಂದು ಹೇಳಲಾಗಿದೆ. ಮತ್ತೆ 165 ಜೆಎನ್ 1 ಸೋಂಕು ಪ್ರಕರಣಗಳು ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ನಿನ್ನೆ 296 ಜನರಿಗೆ ಕೋರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೈಸೂರಿನಲ್ಲಿ ಒಂದು ಸಾವು ವರದಿಯಾಗಿದೆ. ಬೆಂಗಳೂರಿನಲ್ಲಿ 131 ಜನರಿಗೆ ಸೋಂಕು ತಗುಲಿದ್ದು, ರಾಜ್ಯದಲ್ಲಿ ಪಾಸಿಟಿವಿಟಿದ ದರ ಶೇ. 5.89 ರಷ್ಟು ಇದೆ ಕಳೆದ. 24 ಗಂಟೆಗಳ ಅವಧಿಯಲ್ಲಿ 5021 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. 1245 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ಡಿ.25ರಂದು 60 ಮಾದರಿಗಳ ವರದಿ ಬಂದಿದ್ದು 34 ಮಂದಿಗೆ ಜೆಎನ್1 ಉಪತಳಿ ಸೋಂಕು ದೃಢಪಟ್ಟಿತ್ತು. ಸೋಮವಾರದ ವೇಳೆಗೆ 296 ಸೋಂಕು ಪ್ರಕರಣಗಳ ಜಿನೋಮಿಕ್ ಸೀಕ್ವೆನ್ ವರದಿ ಬಂದಿದೆ. 296 ರಲ್ಲಿ ಬರೋಬ್ಬರಿ 199 ಮಂದಿಗೆ ಜೆಎನ್.1 ಉಪತಳಿ ಹರಡಿರುವುದು ದೃಢಪಟ್ಟಿದೆ.