alex Certify ರಾಜ್ಯದ ಐಪಿಎಸ್ ಅಧಿಕಾರಿ ಕೃಷ್ಣಕಾಂತ್ ಕೇಂದ್ರ ಸೇವೆಗೆ ನಿಯೋಜನೆ: ಸಿಬಿಐ ಎಸ್.ಪಿ.ಯಾಗಿ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಐಪಿಎಸ್ ಅಧಿಕಾರಿ ಕೃಷ್ಣಕಾಂತ್ ಕೇಂದ್ರ ಸೇವೆಗೆ ನಿಯೋಜನೆ: ಸಿಬಿಐ ಎಸ್.ಪಿ.ಯಾಗಿ ನೇಮಕ

ನವದೆಹಲಿ: ರಾಜ್ಯದ ಐಪಿಎಸ್ ಅಧಿಕಾರಿಯನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಲಾಗಿದೆ. ಸಿಬಿಐ ಎಸ್.ಪಿ.ಯಾಗಿ ಪಿ. ಕೃಷ್ಣಕಾಂತ್ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಬೆಂಗಳೂರು ದಕ್ಷಿಣ ಡಿಸಿಪಿಯಾಗಿದ್ದ ಕೃಷ್ಣಕಾಂತ್ ಅವರನ್ನು ಕೇಂದ್ರ ಸೇವೆಗೆ ನಿಯೋಜಿಸಲಾಗಿದೆ.

ಐಪಿಎಸ್ ಅಧಿಕಾರಿಗಳಾದ ಆರ್. ರಾಮ್ ಕುಮಾರ್ ಮತ್ತು ಪಿ. ಕೃಷ್ಣಕಾಂತ್ ಅವರನ್ನು ಸೋಮವಾರ ಕೇಂದ್ರೀಯ ತನಿಖಾ ದಳದ(ಸಿಬಿಐ) ಪೊಲೀಸ್ ವರಿಷ್ಠಾಧಿಕಾರಿಗಳಾಗಿ ನೇಮಿಸಲಾಗಿದೆ.

ಆರ್. ರಾಮ್ ಕುಮಾರ್ ಜಾರ್ಖಂಡ್ ಕೇಡರ್‌ನ 2015 ರ ಬ್ಯಾಚ್ ಭಾರತೀಯ ಪೊಲೀಸ್ ಸೇವೆ(IPS) ಅಧಿಕಾರಿ. ಕೃಷ್ಣಕಾಂತ್ ಕರ್ನಾಟಕ ಕೇಡರ್‌ನ 2016 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಈ ಇಬ್ಬರೂ ಅಧಿಕಾರಿಗಳನ್ನು ಐದು ವರ್ಷಗಳ ಅವಧಿಗೆ ಸಿಬಿಐನಲ್ಲಿ ಎಸ್‌ಪಿ ಹುದ್ದೆಗೆ ಸೇರ್ಪಡೆಗೊಳಿಸಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...