alex Certify ಪಾಕ್‌ ನರಿ ಬುದ್ದಿ ಜಗತ್ತಿನೆದುರು ಮತ್ತೊಮ್ಮೆ ಬಟಾಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್‌ ನರಿ ಬುದ್ದಿ ಜಗತ್ತಿನೆದುರು ಮತ್ತೊಮ್ಮೆ ಬಟಾಬಯಲು

ಭಾರತದ ಪುಲ್ವಾಮಾ ಮೇಲೆ ನಡೆಸಿದ ದಾಳಿ ಸರ್ಕಾರದ ಅತಿ ದೊಡ್ಡ ಸಾಧನೆ ಅಂತಾ ಪಾಕ್​ ಸಂಸತ್​ನಲ್ಲಿ ಸಚಿವ ಫವಾದ್​ ಚೌದರಿ ಹೇಳುವ ಮೂಲಕ ಜಗತ್ತಿನೆದುರು ಮತ್ತೊಮ್ಮೆ ಪಾಪಿ ಪಾಕಿಸ್ತಾನದ ಬಣ್ಣ ಬಯಲಾಗಿದೆ.

ಇಮ್ರಾನ್​ ಸರ್ಕಾರ ಪಾಕಿಸ್ತಾನವನ್ನ ಯಶಸ್ಸಿನ ಕಡೆಗೆ ತೆಗೆದುಕೊಂಡು ಹೋಗಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸಂಸತ್​ನಲ್ಲಿ ಉತ್ತರಿಸಿದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್​​ ಚೌಧರಿ, ಭಾರತದ ಪುಲ್ವಾಮಾ ಮೇಲೆ ನಡೆದ ದಾಳಿಗೆ ಯೋಜನೆಗೆ ಪ್ಲಾನ್​ ಸಿದ್ಧವಾಗಿದ್ದೇ ಪಾಕಿಸ್ತಾನದಲ್ಲಿ. ಹೀಗಾಗಿ ಈ ಅಟ್ಯಾಕ್​ನ ಕೀರ್ತಿ ಇಮ್ರಾನ್​ ಖಾನ್​ ಸರ್ಕಾರಕ್ಕೆ ಸಿಗಬೇಕು ಅಂತಾ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಪುಲ್ವಾಮಾ ದಾಳಿ ನಡೆಸಿದ್ದು ಪಾಕಿಸ್ತಾನ ಅಂತಾ ಭಾರತ ಮಾಡಿದ ಆರೋಪವನ್ನ ಇಮ್ರಾನ್​ ಖಾನ್​ ಸರ್ಕಾರ ತಿರಸ್ಕರಿಸುತ್ತಲೇ ಬಂದಿತ್ತು. ಆದರೆ ಈಗ ಪಾಕ್​ ಸಂಸತ್ತಿನಲ್ಲೇ ಇಮ್ರಾನ್​ ಖಾನ್​ ಸರ್ಕಾರದ ನರಿ ಬುದ್ಧಿ ಬಟಾ ಬಯಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...