alex Certify ಕೊರೊನಾ ವಿರುದ್ಧ ದೀಪಾವಳಿ ಹಬ್ಬದ ಸಂದೇಶ ಸಾರಿದ ಯುಕೆ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿರುದ್ಧ ದೀಪಾವಳಿ ಹಬ್ಬದ ಸಂದೇಶ ಸಾರಿದ ಯುಕೆ ಪ್ರಧಾನಿ

ಯುಕೆ ಪ್ರಧಾನಿ ಬೋರಿಸ್​ ಜಾನ್ಸನ್​​ ದೀಪಾವಳಿ ಹಬ್ಬದ ಸಂದೇಶದಂತೆ ಕರೊನಾವನ್ನ ಸಂಕಷ್ಟದಿಂದ ದೂರವಾಗೋಣ ಎಂಬ ಕರೆ ನೀಡಿದ್ದಾರೆ.

ಇಂಗ್ಲೆಂಡ್​ನಲ್ಲಿ ಕರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದಂತೆ ಲಾಕ್​ಡೌನ್​ 2.0 ಘೋಷಣೆ ಮಾಡಲಾಗಿದೆ. ನಮ್ಮ ಮುಂದೆ ದೊಡ್ಡ ಸವಾಲಿರೋದು ನಿಜ. ಆದರೆ ದೇಶದ ಜನತೆ ಸಂಕಲ್ಪ ಹಾಗೂ ಸಮಯಪ್ರಜ್ಞೆಯಿಂದ ಈ ವೈರಸ್ ವಿರುದ್ಧ ನಾವು ಜಯಿಸುತ್ತೇವೆಂಬ ನಂಬಿಕೆ ಇದೆ. ಬೆಳಕು ಕತ್ತಲೆಯ ವಿರುದ್ಧ ಜಯ ಸಾಧಿಸುತ್ತೆ. ರಾವಣನ ಕಪಿಮುಷ್ಠಿಯಿಂದ ಸೀತಾಳನ್ನ ಬಚಾವ್​ ಮಾಡಿದ ರಾಮನಿಗೆ ಲಕ್ಷ ದೀಪದ ಸ್ವಾಗತ ಕೋರಲಾಯ್ತು. ಅದೇ ರೀತಿ ನಾವೂ ನಮ್ಮ ವಿಜಯದ ದಾರಿ ಕಂಡುಕೊಳ್ಳುತ್ತೇವೆ. ಅಂತಾ ಹೇಳಿದ್ದಾರೆ.

ಯುಕೆಯಲ್ಲಿರುವ ಭಾರತೀಯ ಸಮುದಾಯ ಸುರಕ್ಷಿತ ದೀಪಾವಳಿ ಆಚರಣೆಗೆ ಮುಂದಾಗಿದೆ. ಇದನ್ನ ನಾವು ಶ್ಲಾಘಿಸುತ್ತೇವೆ ಅಂತಂದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...