alex Certify ಸಂತ್ರಸ್ತರಿಗೆ ಭಾರತೀಯ ಕುಟುಂಬದಿಂದ ಉಚಿತ ಊಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂತ್ರಸ್ತರಿಗೆ ಭಾರತೀಯ ಕುಟುಂಬದಿಂದ ಉಚಿತ ಊಟ

ಅರ್ಮೇನಿಯಾ ಹಾಗೂ ಅಜೆರ್ಬೈಜಾನ್​ ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ಅನೇಕರು ಸಾವನ್ನಪ್ಪಿದ್ದರೆ, ನಾಗೋರ್ನೋ ಹಾಗೂ ಖರ್ಬಾ ಪ್ರದೇಶದ ಸಾವಿರಾರು ಜನರು ಸಪ್ಟೆಂಬರ್​ ತಿಂಗಳಿನಿಂದ ನಿರಾಶ್ರಿತರಾಗಿದ್ದಾರೆ.

ಗಡಿ ಪ್ರದೇಶದಲ್ಲಿ ನಿರಾಶ್ರಿತರಾಗಿರೋ ಜನತೆಗೆ ಸಹಾಯ ಮಾಡಲು ಉಭಯ ರಾಷ್ಟ್ರಗಳ ಪ್ರಜೆಗಳು ಮುಂದಾಗಿದ್ದಾರೆ. ಈ ಸಾಲಿನಲ್ಲಿ ಭಾರತೀಯ ಕುಟುಂಬವೂ ಸೇರಿದೆ ಅನ್ನೋದು ವಿಶೇಷ. ಗಡಿಯಲ್ಲಿನ ಜನರ ಕಷ್ಟ ಆಲಿಸಿದ ಅರ್ಮೇನಿಯಾದ ಭಾರತೀಯ ಮೂಲದ ಕುಟುಂಬ ಸಹಾಯಹಸ್ತ ಚಾಚೋ ಮೂಲಕ ಮಾನವೀಯತೆ ಮೆರೆದಿದೆ.

ತಮ್ಮ ರೆಸ್ಟೋರೆಂಟ್​ನ್ನ ನಿರಾಶ್ರಿತರಿಗೆ ಉಚಿತ ಭೋಜನ ಕೇಂದ್ರವನ್ನಾಗಿ ಮಾರ್ಪಡಿಸಿದೆ ಭಾರತೀಯ ಮೂಲದ ಕುಟುಂಬ. ಮೂಲತಃ ಪಂಜಾಬ್​ನವರಾದ 47 ವರ್ಷದ ಪರ್ವೇಜ್​ ಅಲಿ ಖಾನ್​ ಕಳೆದ 6 ವರ್ಷಗಳಿಂದ ಅರ್ಮೇನಿಯಾದಲ್ಲಿ ‘ಇಂಡಿಯನ್​ ಮೆಹಕ್​​ ರೆಸ್ಟೋರೆಂಟ್​ & ಬಾರ್​’ನ್ನ ನಡೆಸಿಕೊಂಡು ಬರ್ತಿದ್ದಾರೆ. ಆದ್ರೀಗ ದೇಶದ ಗಡಿಭಾಗದಲ್ಲಿ ನಿರಾಶ್ರಿತರು ಅನುಭವಿಸ್ತಾ ಇರೋ ಕಷ್ಟವನ್ನ ಆಲಿಸಿದ ಖಾನ್​ ಕುಟುಂಬ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ನಿರಾಶ್ರಿತರಿಗೆ ಬಟ್ಟೆಗಳನ್ನ ಒದಗಿಸಿರೋ ಪರ್ವೇಜ್​ ಅಲಿ ಇದೀಗ ತಮ್ಮ ರೆಸ್ಟೋರೆಂಟ್​​​ನ್ನೂ ನಿರಾಶ್ರಿತರಿಗೆ ಬಿಟ್ಟುಕೊಟ್ಟಿದ್ದಾರೆ.

Շատ շնորհակալ ենք մեր բոլոր հետևորդներին՝ մեր ՝ Արցախից ժամանած հայերին «Ինդիան Մեհակի» կերակուրներով օգնելու մասին…

Posted by Indian Mehak Restaurant & Bar on Sunday, October 4, 2020

https://www.facebook.com/watch/?v=2803350216566909&t=0

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...