alex Certify ಮಡದಿ ನೆನಪಲ್ಲಿ ರಸ್ತೆ ಬದಿಯಲ್ಲೇ ʼಹೃದಯʼದ ಚಿತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಡದಿ ನೆನಪಲ್ಲಿ ರಸ್ತೆ ಬದಿಯಲ್ಲೇ ʼಹೃದಯʼದ ಚಿತ್ರ…!

ದುಬೈ‌ನಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ತೆಲಂಗಾಣದ ವ್ಯಕ್ತಿಯೊಬ್ಬರು ತಮ್ಮ ಮಡದಿಯ ನೆನಪಿನಲ್ಲಿ ಕಳೆದುಹೋಗಿ, ತಾವು ಕ್ಲೀನ್ ಮಾಡುತ್ತಿದ್ದ ರಸ್ತೆ ಬದಿಯಲ್ಲಿ ಮರದಿಂದ ಬಿದ್ದ ಹೂವಿನ ದಳಗಳಿಂದ ಹೃದಯದ ಚಿತ್ರ ಬಿಡಿಸಿದ್ದಾರೆ.

ರಮೇಶ್ ಗಂಗರಾಜಂ ಗಂಡಿ ಹೆಸರಿನ ಈ ವ್ಯಕ್ತಿಯು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮಡದಿ ಲತಾರನ್ನು ವರಿಸಿದ್ದರು. ಇದಾದ ಬಳಿಕ ಒಳ್ಳೆಯ ಸವಲತ್ತುಗಳಿರುವ ಉದ್ಯೋಗ ಸಿಕ್ಕ ಬಳಿಕ ಅವರು ದುಬೈ‌ಗೆ ತರಳಿದ್ದರು.

ರಮೇಶ್ ಅವರು ತಮ್ಮ ಮಡದಿಯ ನೆನಪಿನಲ್ಲಿ ಈ ಚಿತ್ರವನ್ನು ಬಿಡಿಸುತ್ತಿದ್ದ ವೇಳೆ, ಆ ಜಾಗದ ಪಕ್ಕದಲ್ಲೇ ಇದ್ದ ಆಫೀಸ್ ವರ್ಕರ್‌ ಒಬ್ಬರು ಈ ಚಿತ್ರವನ್ನು ಸೆರೆ ಹಿಡಿದುಕೊಂಡು, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಚಿತ್ರವು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...