alex Certify ತನ್ನ ಭಾವಚಿತ್ರವಿರುವ ಕರೆನ್ಸಿ ಬಿಡುಗಡೆ ಮಾಡಿದ ಸ್ವಾಮಿ ನಿತ್ಯಾನಂದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಭಾವಚಿತ್ರವಿರುವ ಕರೆನ್ಸಿ ಬಿಡುಗಡೆ ಮಾಡಿದ ಸ್ವಾಮಿ ನಿತ್ಯಾನಂದ…!

ಬಿಡದಿಯ ಸ್ವಾಮಿ ನಿತ್ಯಾನಂದ ಅಮೆರಿಕಾದ ದ್ವೀಪವೊಂದರಲ್ಲಿ ತನ್ನದೇ ಆದ ಪ್ರತ್ಯೇಕ ರಾಷ್ಟ್ರವನ್ನು ಘೋಷಿಸಿಕೊಂಡಿದ್ದಾನೆ. ಈ ರಾಷ್ಟ್ರಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದ ಆತ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್ ಸ್ಥಾಪಿಸಲು ಮುಂದಾಗಿದ್ದಾನೆ.

ಹೌದು, ನಿತ್ಯಾನಂದನ ‘ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್’ ಗಣೇಶ ಹಬ್ಬದ ದಿನವಾದ ಆಗಸ್ಟ್ 22ರಂದು ಸ್ಥಾಪನೆಯಾಗಲಿದ್ದು, ಇದರ ಜೊತೆಗೆ ಪ್ರತ್ಯೇಕ ಅರ್ಥ ವ್ಯವಸ್ಥೆ ಸೃಷ್ಟಿಸಿಕೊಳ್ಳಲು ಮುಂದಾಗಿರುವ ಸ್ವಾಮಿ ನಿತ್ಯಾನಂದ, ತನ್ನದೇ ಭಾವಚಿತ್ರವಿರುವ ಕರೆನ್ಸಿ ಬಿಡುಗಡೆ ಮಾಡಿರುವ ಕುರಿತು ಘೋಷಣೆ ಮಾಡಿದ್ದಾನೆ.

ನಿತ್ಯಾನಂದ ಸ್ಥಾಪಿಸಿರುವ ಬ್ಯಾಂಕ್ ಆಫ್ ಕೈಲಾಶ್, ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದ್ದು, ಸ್ವಾಮಿ ನಿತ್ಯಾನಂದನೇ ಸ್ವತಃ ವಿಡಿಯೋ ಸಂದೇಶದಲ್ಲಿ ಈ ವಿಚಾರವನ್ನು ತಿಳಿಸಿದ್ದಾನೆ. ನಿತ್ಯಾನಂದ ಬಿಡುಗಡೆಗೊಳಿಸಿರುವ 100 ಮುಖ ಬೆಲೆಯ ನೋಟು ಅಮೆರಿಕನ್ ಡಾಲರ್ ರೀತಿಯಲ್ಲಿರುವುದು ವಿಶೇಷ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...