ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಹರಡಿದೆ. ಸೋಂಕು ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಮಡಗಾಸ್ಕರ್ ರಾಷ್ಟ್ರಪತಿಗಳು ಗಿಡಮೂಲಿಕೆ ಚಹಾ ಮತ್ತು ಗಿಡಮೂಲಿಕೆ ಪಾನೀಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಈ ವೈರಸ್ಗೆ ಗಿಡಮೂಲಿಕೆ ಮೂಲಕ ಚಿಕಿತ್ಸೆ ನೀಡಬಹುದು ಎಂದವರು ಹೇಳಿದ್ದಾರೆ. ಮಲಗಾಸಿ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ರಿಸರ್ಚ್ನಲ್ಲಿ ತಮ್ಮ ಮಂತ್ರಿಗಳು, ರಾಜತಾಂತ್ರಿಕರು ಮತ್ತು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಈ ಔಷಧದ ಬಗ್ಗೆಯೂ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದಿದ್ದಾರೆ. ಇಬ್ಬರಿಗೆ ಇದ್ರ ಮೂಲಕ ಚಿಕಿತ್ಸೆ ನೀಡಲಾಗ್ತಿದೆ ಎಂದಿದ್ದಾರೆ.
ಏಳು ದಿನಗಳಲ್ಲಿ ಫಲಿತಾಂಶ ಸಿಗಲಿದೆ ಎಂದು ಮಡಗಾಸ್ಕರ್ ರಾಷ್ಟ್ರಪತಿಗಳು ಹೇಳಿದ್ದಾರೆ. ಇದು ಸುರಕ್ಷಿತವೆಂದು ಹೇಳಿದ ರಾಷ್ಟ್ರಪತಿಗಳು ಪಾನೀಯವನ್ನು ಕುಡಿದಿದ್ದಾರೆ. ಇದ್ರಿಂದ ಜೀವಕ್ಕೆ ಅಪಾಯವಿಲ್ಲವೆಂದಿದ್ದಾರೆ.