alex Certify ಅಂತರ್ಜಾತಿ ವಿವಾಹವಾಗಿದ್ದಕ್ಕೆ ಬಹಿಷ್ಕಾರ…! ಹತ್ತು ವರ್ಷಗಳ ಬಳಿಕ ಸಿಕ್ತು ಗ್ರಾಮ ಪ್ರವೇಶಕ್ಕೆ ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಬಹಿಷ್ಕಾರ…! ಹತ್ತು ವರ್ಷಗಳ ಬಳಿಕ ಸಿಕ್ತು ಗ್ರಾಮ ಪ್ರವೇಶಕ್ಕೆ ಅನುಮತಿ

ದಿನಗೂಲಿ ಕಾರ್ಮಿಕರಾಗಿದ್ದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಥೆರ್​ಕೂರೈ ಗ್ರಾಮದ ನಿವಾಸಿಗಳಾಗಿದ್ದ ಪರಮೇಶ್ವರನ್​ ಹಾಗೂ ಉಮಾವತಿ 10 ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಯುವತಿ ಅನ್ಯಜಾತಿಯಾಗಿದ್ದರಿಂದ ಪರಮೇಶ್ವರನ್​ ಪೋಷಕರು ಈ ಮದುವೆಗೆ ಒಪ್ಪಿರಲಿಲ್ಲ. ಆದರೆ ಉಮಾವತಿ ಕುಟುಂಬಸ್ಥರಿಂದ ಬೆಂಬಲ ಸಿಕ್ಕಿತ್ತು.

ಉಮಾವತಿ ಹಾಗೂ ಪರಮೇಶ್ವರ್​ ವಿವಾಹವಾದ ಬಳಿಕ ಗ್ರಾಮಸ್ಥರು ಕಳೆದ 10 ವರ್ಷಗಳಿಂದ ಇವರಿಗೆ ಬಹಿಷ್ಕಾರ ಹಾಕಿದ್ದರು. ಅಂದರೆ ಅವರು ಗ್ರಾಮದ ದೇವಸ್ಥಾನ , ಕುಡಿಯುವ ನೀರಿನ ಸ್ಥಳ ಹೀಗೆ ಎಲ್ಲಿಯೂ ಕೂಡ ಪ್ರವೇಶಿಸುವಂತಿರಲಿಲ್ಲ. ಹೀಗಾಗಿ ಗ್ರಾಮದ ಗಡಿ ಭಾಗದಲ್ಲಿ ಈ ದಂಪತಿ ವಾಸವಾಗಿತ್ತು.

ಉಮಾವತಿ ತಾಯಿಗೆ ಸೇರಿದ ಜಾಗದಲ್ಲಿ ಮನೆ ಮಾಡಿ ಜೀವನ ಮಾಡುವ ಬಗ್ಗೆ ದಂಪತಿ ಯೋಚಿಸಿದ್ದರು. ಆದರೆ ಗ್ರಾಮಸ್ಥರು ಮಾತ್ರ ಕಲ್ಲು ಹಾಗೂ ಮುಳ್ಳನ್ನು ಹರಡಿ ಗ್ರಾಮಕ್ಕೆ ಬರುವ ಮಾರ್ಗವನ್ನೇ ಬಂದ್​ ಮಾಡಿಸಿದ್ರು. ಬರೋಬ್ಬರಿ 10 ವರ್ಷಗಳ ಬಹಿಷ್ಕಾರದ ಬಳಿಕ ಇದೀಗ ಈ ದಂಪತಿ ಗ್ರಾಮಕ್ಕೆ ಮರಳಲು ನಿರ್ಧರಿಸಿದ್ದಾರೆ.

ದಂಪತಿ ತಮಗಾದ ಅನ್ಯಾಯದ ಬಗ್ಗೆ ಹತ್ತಿರದ ಪೊಲೀಸ್​ ಠಾಣೆಗೆ ದೂರು ನೀಡಿದ್ದು ಇದೀಗ ಈ ಪ್ರಕರಣವನ್ನು ಕಂದಾಯ ಇಲಾಖೆ ಕೈಗೆತ್ತಿಕೊಂಡಿದೆ.

ತಹಸೀಲ್ದಾರ್​​ ಪರಮೇಶ್ವರನ್​ ನೇತೃತ್ವದ ತಂಡವು ಗ್ರಾಮಕ್ಕೆ ಭೇಟಿ ನೀಡಿ ಈ ಸಂಬಂಧ ಚರ್ಚೆ ನಡೆಸಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾಮಕ್ಕೆ ಭೇಟಿ ನೀಡಿದ್ದೇವೆ. ಸಮಸ್ಯೆ ಬಗೆಹರಿದಿದೆ. ಅವರ ಜಾಗಕ್ಕೆ ಮರಳಲು ದಾರಿಯನ್ನು ಸುಗಮಗೊಳಿಸಿದ್ದೇವೆ. ಶೀಘ್ರದಲ್ಲೇ ದಾಖಲೆಗಳನ್ನು ನೀಡುತ್ತೇವೆ ಎಂದು ತಹಶೀಲ್ದಾರ್​ ಪರಮೇಶ್ವನ್​ ಹೇಳಿದ್ದಾರೆ.

ಅಲ್ಲದೇ ಯಾವುದೇ ಕಾರಣಕ್ಕೂ ದಂಪತಿಗೆ ಕಿರುಕುಳ ನೀಡುವಂತಿಲ್ಲ ಎಂದು ಗ್ರಾಮಸ್ಥರಿಗೆ ಅಧಿಕಾರಿಗಳು ವಾರ್ನಿಂಗ್​ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...