alex Certify ರಸ್ತೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಬಯಲಾಯ್ತು ಕಾಮಗಾರಿ ಅಸಲಿಯತ್ತು..! ತೆಂಗಿನಕಾಯಿ ಒಡೆಯುತ್ತಿದ್ದಂತೆ ಬಿಡ್ತು ಬಿರುಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಬಯಲಾಯ್ತು ಕಾಮಗಾರಿ ಅಸಲಿಯತ್ತು..! ತೆಂಗಿನಕಾಯಿ ಒಡೆಯುತ್ತಿದ್ದಂತೆ ಬಿಡ್ತು ಬಿರುಕು

ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣಗೊಂಡಿದ್ದ 7 ಕಿಲೋಮೀಟರ್​ ರಸ್ತೆ ಉದ್ಘಾಟನೆಗೆ ತೆರಳಿದ್ದ ವೇಳೆ ಬಿಜೆಪಿ ಶಾಸಕಿಯೊಬ್ಬರು ಮುಜುಗರದ ಪ್ರಸಂಗಕ್ಕೆ ಸಾಕ್ಷಿಯಾದ ಘಟನೆಯು ಉತ್ತರ ಪ್ರದೇಶದ ಬಿಜ್ನೋರ್​ ಎಂಬಲ್ಲಿ ನಡೆದಿದೆ. ರಸ್ತೆ ಉದ್ಘಾಟನೆ ಪ್ರಯುಕ್ತ ತೆಂಗಿನಕಾಯಿ ಒಡೆಯುವ ವೇಳೆ ರಸ್ತೆಯೇ ಬಿರುಕುಬಿಟ್ಟಿದೆ..!

ಇದರಿಂದ ಕೋಪಗೊಂಡ ಬಿಜ್ನೋರ್​ ಸಾದರ್​ ಕ್ಷೇತ್ರದ ಶಾಸಕಿ ಸುಚಿ ಮೌಸಮ್​ ಚೌಧರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಕಾದು ಬಳಿಕ ರಸ್ತೆಯ ಕಾಮಗಾರಿ ಸ್ಯಾಂಪಲ್​ನ್ನು ತನಿಖೆ ಮಾಡುವಂತೆ ಆದೇಶಿಸಿದ್ದಾರೆ.

ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಶಾಸಕಿ ಸುಚಿ ಮೌಸಂ ಚೌಧರಿ ಆದೇಶಿಸಿದ್ದಾರೆ. ಅಲ್ಲದೇ ಡಾಂಬರು ಮಾದರಿಯನ್ನು ಸಂಗ್ರಹ ಮಾಡಲು ಸ್ಥಳದಲ್ಲಿ ವಿಶಾಲವಾದ ಗುಂಡಿಯನ್ನು ತೋಡಲು ಶಾಸಕಿ ಕೂಡ ಸಹಾಯ ಮಾಡಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಶಾಸಕಿ ಸುಚಿ ಮೌಸಂ ಚೌಧರಿ, ನೀರಾವರಿ ಇಲಾಖೆಯು 1.16 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಮರು ನಿರ್ಮಾಣ ಕಾರ್ಯವನ್ನು ಮಾಡಿದೆ. ಇದು ಸುಮಾರು 7.5 ಕಿಲೋಮೀಟರ್​ ಉದ್ದದ ರಸ್ತೆಯಾಗಿದ್ದು ನನ್ನನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಇಲ್ಲಿ ನೋಡಿದರೆ ತೆಂಗಿನಕಾಯಿ ಒಡೆಯುತ್ತಲೇ ರಸ್ತೆ ಬಿರುಕುಬಿಟ್ಟಿದೆ ಎಂದು ಹೇಳಿದ್ರು.

— Alok Pandey (@alok_pandey) December 3, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...