alex Certify SHOCKING; ಸಿಗರೇಟ್ ನಿಂದ ಖಾಸಗಿ ಅಂಗ ಸುಟ್ಟು ಬೆತ್ತಲೆ ಹೊರಕಳಿಸಿ ಕಿರುಕುಳ, ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING; ಸಿಗರೇಟ್ ನಿಂದ ಖಾಸಗಿ ಅಂಗ ಸುಟ್ಟು ಬೆತ್ತಲೆ ಹೊರಕಳಿಸಿ ಕಿರುಕುಳ, ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ

ಇಂದೋರ್: ದುರುಳನೊಬ್ಬ ಪತ್ನಿಗೆ ದೈಹಿಕ ಹಿಂಸೆ ನೀಡಿದ್ದಲ್ಲದೇ, ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಂಗಲಿಯ ತೋಟದ ಮನೆಗೆ ಕರೆದೊಯ್ದು ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆರೋಪಿ ಬಿಲ್ಡರ್ ರಾಜೇಶ್ ವಿಶ್ವಕರ್ಮ, ಸೇವಕ ಅಂಕೇಶ್ ಬಘೇಲ್, ವಿಪಿನ್ ಭದೌರಿಯಾ ಮತ್ತು ಸ್ನೇಹಿತ ವಿವೇಕ್ ವಿಶ್ವಕರ್ಮ ಮತ್ತು ಇತರರ ವಿರುದ್ಧ ಶಿಪ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನನ್ನು ತೋಟದ ಮನೆಯಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯೊಂದಿಗೆ ಅಸಹಜ ಕೃತ್ಯಗಳನ್ನು ಎಸಗಿ ಆಕೆಯ ಖಾಸಗಿ ಅಂಗವನ್ನು ಸಿಗರೇಟಿನಿಂದ ಸುಟ್ಟು ಹಾಕುತ್ತಿದ್ದ ಗಂಡ ಅವಳನ್ನು ಕೊಲ್ಲಲು ವಿಪಿನ್ ಮತ್ತು ಅವನ ಸಹಚರರಲ್ಲಿ ಒಬ್ಬನನ್ನು ಕಳುಹಿಸಿದ್ದ. ಈ ವಿಷಯ ತಿಳಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಆರೋಪಿ ರಾಜೇಶ್ ವಿಶ್ವಕರ್ಮ ಮಹಿಳೆಯನ್ನು ಮೆಟ್ರೋಮೋನಿಯಲ್ ಸೈಟ್ ಮೂಲಕ ಪರಿಚಯಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 24 ರಂದು ಆರೋಪಿಗಳು ಛತ್ತೀಸ್‌ಗಢದ ಬೆಮ್ಟ್ರಾದಲ್ಲಿ ವಿವಾಹವಾಗಿದ್ದರು. ಅವರ ಸ್ನೇಹಿತರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಪೋಷಕರು ಮತ್ತು ಸಂಬಂಧಿಕರ ಬಗ್ಗೆ ಕೇಳಿದಾಗ, ಸರಿಯಾಗಿ ಮಾಹಿತಿ ನೀಡಿರಲಿಲ್ಲ.

ಮದುವೆಯಾದ ನಂತರ ಇಂದೋರ್ ಗೆ ತಂದು ನಾಲ್ಕು ದಿನ ರೆಜೆಂಟಾ ಹೋಟೆಲ್ ನಲ್ಲಿ ತಂಗಿದ್ದರು. ಅಕ್ಟೋಬರ್ 29 ರಂದು ಅವರು ಮಂಗಳಿಯ ಯುವರಾಜ್ ಫಾರ್ಮ್ ಹೌಸ್ಗೆ ಕರೆದೊಯ್ದು ಕೆಲ ದಿನ ಇಲ್ಲಿ ಸರಿಯಾಗಿದ್ದ. ನಂತರ ವರಸೆ ಬದಲಿಸಿದ್ದ.

ಆಕೆಗೆ ನಿಂದಿಸಿ, ಹೊಡೆಯಲು ಆರಂಭಿಸಿದ್ದ. ಆ ಬಳಿಕ ಅಸಹಜ ಕೃತ್ಯಗಳನ್ನು ಮಾಡತೊಡಗಿದ. ಮಹಿಳೆ ನಿರಾಕರಿಸಿದಾಗ ಸಿಗರೇಟಿನಿಂದ ಆಕೆಯ ಖಾಸಗಿ ಅಂಗಕ್ಕೆ ಸುಡುತ್ತಿದ್ದ. ರಕ್ತ ಬರುವಮತೆ ಥಳಿಸುತ್ತಿದ್ದ. ಕೆಲಸಗಾರರ ಮುಂದೆ ಬಲವಂತವಾಗಿ ಬೆತ್ತಲೆಯಾಗಿ ಕಳುಹಿಸುತ್ತಿದ್ದ. ಪ್ರತಿರೋಧ ತೋರಿದರೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದ ಎಂದು ದೂರಲಾಗಿದೆ.

ಕೆಲವು ದಿನಗಳ ನಂತರ ಅವನು ತನ್ನ ಸ್ನೇಹಿತರನ್ನು ಮನೆಗೆ ಕರೆಯಲು ಪ್ರಾರಂಭಿಸಿದನು. ಇದಾದ ನಂತರ ಆತ ತನ್ನ ಸೇವಕ ವಿಪಿನ್, ಅಂಕೇಶ್ ಮತ್ತು ಸ್ನೇಹಿತ ವಿವೇಕ್ ವಿಶ್ವಕರ್ಮ ಜೊತೆಗೂಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ನಂತರ ಗರ್ಭನಿರೋಧಕ ಮಾತ್ರೆ ನೀಡಿದ್ದಾನೆ. ಆರೋಪಿ ಪತಿ ರಾಜೇಶ್ ಹಲವು ಬಾರಿ ನಗ್ನ ಹಾಗೂ ಅರೆಬೆತ್ತಲೆಯ ಫೋಟೋ, ವಿಡಿಯೋ ಚಿತ್ರೀಕರಣ ಮಾಡಿ ಯಾರಿಗಾದರೂ ದೂರು ನೀಡಿದರೆ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...