ರಕ್ಷಾ ಬಂಧನವೆಂದರೆ ಎಲ್ಲೆಡೆಯೂ ಭ್ರಾತೃತ್ವದ ಸಂಭ್ರಮ ಮನೆ ಮಾಡಿರುತ್ತದೆ. ದೇಶಾದ್ಯಂತ ಈ ಹಬ್ಬವನ್ನು ಜನರು ಬಹಳ ಖುಷಿಯಿಂದ ಆಚರಿಸುತ್ತಾರೆ.
ಆದರೆ ಉತ್ತರ ಪ್ರದೇಶದ ಭಿಕಾಂಪುರ್ ಜಗತ್ ಪುರ್ವ ಎಂಬ ಊರಿನಲ್ಲಿ ರಕ್ಷಾ ಬಂಧನ ಆಚರಿಸುವುದಿರಲಿ, ಹಬ್ಬದ ಮಾತನ್ನೂ ಸಹ ಆಡಲು ಜನ ಹಿಂಜರಿಯುತ್ತಾರೆ. ಈ ಹಬ್ಬ ಆಚರಿಸುವುದರಿಂದ ಕೆಟ್ಟ ಶಕುನ ತಮ್ಮ ಮೇಲೆ ಬಂದು ಬೀಳುತ್ತದೆ ಎಂದು ಜನರು ನಂಬಿದ್ದಾರೆ. ಬಹಳ ಹಿಂದಿನಿಂದಲೇ ರಕ್ಷಾ ಬಂಧನದ ಆಚರಣೆ ಮಾಡಿದಾಗೆಲ್ಲಾ, ಏನಾದರೊಂದು ದುರಂತವನ್ನು ಈ ಊರು ಕಾಣುತ್ತಲೇ ಬಂದಿದೆ.
ಈ ಊರಿನಲ್ಲಿ 20 ಮನೆಗಳಿದ್ದು, 200 ಮಕ್ಕಳಿದ್ದಾರೆ. ಆದರೆ ಯಾರೊಬ್ಬರೂ ಸಹ ರಾಖಿ ಎನ್ನುವ ಮಾತನ್ನೇ ತೆಗೆಯುವುದಿಲ್ಲ. ಕಳೆದ ಐದು ದಶಕಗಳಿಂದ ಈ ಊರಿನಲ್ಲಿ ರಾಖಿ ಹಬ್ಬವನ್ನು ಆಚರಿಸಿಯೇ ಇಲ್ಲ.