alex Certify ಹೀಗೂ ಸಂಭ್ರಮಿಸಬಹುದು ದೀಪಾವಳಿ ಹಬ್ಬ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೂ ಸಂಭ್ರಮಿಸಬಹುದು ದೀಪಾವಳಿ ಹಬ್ಬ…!

ಪ್ರಧಾನಿ ಮೋದಿ ಕರೆ ನೀಡಿರುವ ವೋಕಲ್​ ಟು ಲೋಕಲ್​ಗೆ ಉತ್ತೇಜನ ನೀಡುವ ಸಲುವಾಗಿ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಯುವಕರು ಸಾರ್ವಜನಿಕರಿಗೆ ಮಾಸ್ಕ್​, ಸ್ಯಾನಿಟೈಸರ್​ ಹಾಗೂ ಹಣತೆಗಳನ್ನ ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಯುವಕರ ಗುಂಪು, ಚೀನಾ ಉತ್ಪನ್ನಗಳನ್ನ ನಿರ್ಬಂಧಿಸಿ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಈ ಪ್ರಯತ್ನ ಮಾಡಿದ್ದೇವೆ ಅಂತಾ ಹೇಳಿದ್ರು.

ಮಿಡ್ನಾಪುರದಲ್ಲಿ ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯುವಕರ ಗುಂಪು ದೀಪಾವಳಿ ಹಬ್ಬವನ್ನ ವಿಶೇಷವಾಗಿ ಆಚರಿಸಲಾಗ್ತಿದೆ. ಅನೇಕ ಕಡೆ ಪಟಾಕಿಗಳ ಬಳಕೆಯನ್ನ ಸ್ವಯಂ ಪ್ರೇರಿತರಾಗಿ ಬ್ಯಾನ್​ ಮಾಡಲಾಗಿದೆ.

ಹರಿಯಾಣದಲ್ಲಿ ಕೊರೊನಾದಿಂದಾಗಿ ಅನೇಕರು ತನ್ನ ಕೆಲಸ ಕಳೆದುಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ಹೋಂ ಮೇಡ್​​ ಹಣತೆಗಳನ್ನ ನಿರ್ಮಾಣ ಮಾಡ್ತಿದ್ದಾರೆ. ಅದೇ ರೀತಿ ಉತ್ತರ ಪ್ರದೇಶ ಬಾರಾಬಂಕಿ ಜಿಲ್ಲೆಯಲ್ಲೂ ಜನರು ಜೀವನೋಪಾಯಕ್ಕೆ ಇದೇ ಮಾರ್ಗವನ್ನ ಕಂಡುಕೊಂಡಿದ್ದಾರೆ.

— ANI (@ANI) November 13, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...