alex Certify ವಿಧಿಯಾಟ: ಸಾವಿನಲ್ಲೂ ಒಂದಾದ ಅವಳಿ ಸಹೋದರರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಿಯಾಟ: ಸಾವಿನಲ್ಲೂ ಒಂದಾದ ಅವಳಿ ಸಹೋದರರು….!

ಅದು ಏಪ್ರಿಲ್​​ 23 1997. ಮೀರತ್​ನ ನಿವಾಸಿಯಾಗಿದ್ದ ಗ್ರೆಗೋರಿ ರೇಯ್ಮಂಡ್​ ರಾಮ್​ಪಾಲ್​ ಹಾಗೂ ಸೋಜಾ ದಂಪತಿಗೆ ಮರೆಯಲಾಗದ ದಿನ. ಈ ದಂಪತಿ ಅಂದು ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಪುಟ್ಟ ಕಂದಮ್ಮಗಳಿಗೆ ದಂಪತಿ ಜೋಫರ್ಡ್​ ಹಾಗೂ ರಾರ್ಫಡ್​ ಎಂದು ನಾಮಕರಣವನ್ನ ಮಾಡಲಾಗಿದ್ದು ಬೆಳೆದು ದೊಡ್ಡವರಾಗಿ ಇಂಜಿನಿಯರಿಂಗ್​ ಪದವಿ ಪಡೆದಿದ್ದ ಮಕ್ಕಳು ಹೈದಾರಾಬಾದ್​ನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರು.

ಆದರೆ ಇವರಿಬ್ಬರ ಬಾಳಲ್ಲಿ ವಿಧಿಯ ಲೆಕ್ಕಾಚಾರ ಬೇರೆಯದ್ದೇ ಇತ್ತು. ಏಪ್ರಿಲ್​ 24ರಂದು ಇಬ್ಬರೂ ಸಹೋದರರಿಗೆ ಜ್ವರ ಕಾಣಿಸಿಕೊಂಡಿದೆ. ಕೋವಿಡ್​ನಿಂದ ಬಳಲುತ್ತಿದ್ದ ಈ ಅವಳಿ ಸಹೋದರರು ಒಂದೇ ದಿನ ಅಸುನೀಗಿದ್ದಾರೆ.

ಚಿಕ್ಕಂದಿನಿಂದಲೂ ಏನೇ ಕೆಲಸ ಮಾಡೋದಾದರೂ ಒಟ್ಟಿಗೆ ಮಾಡುತ್ತಿದ್ದ ಈ ಅಣ್ಣ – ತಮ್ಮ ಇದೀಗ ಸಾವಿನ ಮನೆಗೂ ಒಂದಾಗಿಯೇ ಹೋಗಿದ್ದಾರೆ.

ಅವರೆಂದಿಗೂ ಒಬ್ಬರನ್ನ ಬಿಟ್ಟು ಇನ್ನೊಬ್ಬರು ಮನೆಯಲ್ಲಿ ಇದ್ದವರಲ್ಲ. ಹೀಗಾಗಿ ಕೆಲಗಂಟೆಗಳ ಅಂತರದಲ್ಲಿ ಮೇ 13ರಂದು ಒಬ್ಬ ಹಾಗೂ ಮೇ 14ರಂದು ಇನ್ನೊಬ್ಬ ಸಾವಿನ ಕದ ತಟ್ಟಿದ್ದಾರೆ.

ಕೋವಿಡ್​ನಿಂದ ಬಳಲುತ್ತಿದ್ದ ಈ ಸಹೋದರರು ಮೊದಲು ಮನೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆ ಆಕ್ಸಿಮೀಟರ್​ನ್ನು ಖರೀದಿ ಮಾಡಿ ಮನೆಗೆ ತಂದಿದ್ದಾರೆ. ಅಲ್ಲಿ ಅವರ ಆಕ್ಸಿಜನ್​ ಮಟ್ಟ 90ಕ್ಕೆ ಇಳಿಕೆಯಾಗಿರೋದು ಕಂಡುಬಂದಿದೆ. ಈ ವೇಳೆಯಲ್ಲಿ ವೈದ್ಯರು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದಾರೆ. ಮೇ 1ರಂದು ಇವರನ್ನ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಮೊದಲ ಪರೀಕ್ಷೆಯಲ್ಲಿ ಅವರ ಕೋವಿಡ್​ ವರದಿ ಪಾಸಿಟಿವ್​ ಬಂದಿತ್ತು . ಕೆಲ ದಿನಗಳ ಬಳಿಕ ನಡೆಸಲಾದ ಆರ್​ಟಿ ಪಿಸಿಆರ್​ ಪರೀಕ್ಷೆಯಲ್ಲಿ ಅವರ ವರದಿ ನೆಗೆಟಿವ್​​​ ಬಂದಿದೆ.

ಹೀಗಾಗಿ ವೈದ್ಯರು ಕೋವಿಡ್​ ವಾರ್ಡ್​ನಿಂದ ಸಾಮಾನ್ಯ ಐಸಿಯುವಿಗೆ ಇವರಿಬ್ಬರನ್ನ ಶಿಫ್ಟ್ ಮಾಡಬೇಕು ಎಂದುಕೊಂಡಿದ್ದರು. ಆದರೆ ಇವರ ತಂದೆ ಇನ್ನೊಂದೆರಡು ದಿನ ಮಕ್ಕಳನ್ನ ಕೋವಿಡ್​ ವಾರ್ಡ್​ನಲ್ಲೇ ಪರೀಕ್ಷೆ ಮಾಡಿ ಎಂದು ಮನವಿ ಮಾಡಿದ್ದರು. ಆದರೆ ಮೇ 13ರಂದು ಆಸ್ಪತ್ರೆಯಿಂದ ಬಂದ ಸುದ್ದಿ ನಮ್ಮ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿತು ಎಂದು ಹೇಳುತ್ತಾ ಗ್ರೆಗೋರಿ ಕಣ್ಣೀರಾದ್ರು.

ರಾಫ್ರೆಡ್​ ಕೊನೆಯ ಬಾರಿಗೆ ತನ್ನ ತಾಯಿಗೆ ಆಸ್ಪತ್ರೆ ಬೆಡ್​ನಲ್ಲಿ ಮಲಗಿಯೇ ಕರೆ ಮಾಡಿದ್ದ. ಆತನ ಧ್ವನಿ ನಡುಗುತ್ತಿತ್ತು. ಈ ವೇಳೆ ಆತ ನನ್ನ ಆರೋಗ್ಯ ಸುಧಾರಿಸುತ್ತಿದೆ. ಜೋರ್ಫಡ್​ ಹೇಗಿದ್ದಾನೆ ಎಂದು ಕೇಳಿದ್ದನಂತೆ. ಜೋರ್ಫಡ್​ ನಿಧನನಾಗಿದ್ದಾನೆ ಎಂಬ ಸುದ್ದಿಯನ್ನ ಹೇಳದ ತಾಯಿ ಆತನನ್ನ ದೆಹಲಿ ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದರಂತೆ. ಆದರೆ ರಾರ್ಫಡ್​​ ಅಮ್ಮನ ಬಳಿ ನನಗೊತ್ತು ನೀನು ಸುಳ್ಳು ಹೇಳುತ್ತಿದ್ದೀಯಾ ಎಂದು ಹೇಳಿದ್ದಾನೆ. ಇದಾದ ಕೆಲವೇ ಗಂಟೆಗಳಲ್ಲಿ ರಾರ್ಫಡ್​ ಕೂಡ ಕೊರೊನಾಗೆ ಬಲಿಯಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...