ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 30ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಪಟಾಕಿಗಳ ಬಳಕೆ ಹಾಗೂ ಮಾರಾಟವನ್ನ ದೆಹಲಿಯಲ್ಲಿ ನಿರ್ಬಂಧಿಸಲಾಗಿದೆ. ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟ ಹಿನ್ನೆಲೆ ಎನ್ಜಿಟಿ ಈ ಆದೇಶ ಹೊರಡಿಸಿದೆ.
ಮಧ್ಯಮ ಅಥವಾ ಕಡಿಮೆ ಗುಣಮಟ್ಟ ಹೊಂದಿರುವ ನಗರಗಳು ಹಸಿರು ಪಟಾಕಿಯನ್ನ ಸಿಡಿಸಬಹುದು. ಇದರ ಜೊತೆಯಲ್ಲಿ ದೀಪಾವಳಿ, ಕ್ರಿಸ್ಮಸ್, ಸಮಯದಲ್ಲೂ ಪಟಾಕಿ ಸಿಡಿಸುವ ಸಮಯ ನಿಗದಿ ಮಾಡಬೇಕು ಹಾಗೂ ಇತರೆ ರಾಜ್ಯಗಳು ಕರೊನಾ ಸೋಂಕು ಹೆಚ್ಚಾಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಎನ್ಜಿಟಿ ಅಧ್ಯಕ್ಷ ನ್ಯಾ. ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ಸೂಚನೆ ನೀಡಿದೆ.