alex Certify ‘ದೀದಿ’ ಪಕ್ಷದಲ್ಲಿ ಇದ್ದ ತಪ್ಪಿಗಾಗಿ ಬಸ್ಕಿ ಹೊಡೆದ ಮುಖಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದೀದಿ’ ಪಕ್ಷದಲ್ಲಿ ಇದ್ದ ತಪ್ಪಿಗಾಗಿ ಬಸ್ಕಿ ಹೊಡೆದ ಮುಖಂಡ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಜೋರಾಗಿದೆ. ಆಡಳಿತರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ಸಮರ ನಡೆದಿದೆ. ಇದರ ಮಧ್ಯೆ ಟಿಎಂಸಿಯ ಹಲವು ಸಂಸದ, ಸಚಿವ, ಶಾಸಕರುಗಳು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರುಗಳ ಜೊತೆಗೆ ಬೆಂಬಲಿಗರು ಸಹ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ.

ಹೀಗೆ ಬಿಜೆಪಿ ಸೇರ್ಪಡೆಗೊಂಡ ಮಾಜಿ ಸಚಿವ ಸುವೇಂದು ಅಧಿಕಾರಿ ಅವರ ಕಟ್ಟಾ ಬೆಂಬಲಿಗನೊಬ್ಬ, ತಾನು ಇದುವರೆಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಲ್ಲಿ ಇದ್ದುದಕ್ಕಾಗಿ ಪಶ್ಚಾತಾಪ ಪಟ್ಟು ಕಾರ್ಯಕ್ರಮದ ವೇದಿಕೆಯಲ್ಲೇ ಬಸ್ಕಿ ಹೊಡೆದ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಪರ್ಬೋ ಮೆದಿನಿಪುರ್ ಜಿಲ್ಲೆಯ ಪಿಂಗ್ಲಾದಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಸುಶಾಂತ್ ಪಾಲ್ ಎಂಬಾತ ಬಿಜೆಪಿಯ ದ್ವಜ ಸ್ವೀಕರಿಸಿ ಅಧಿಕೃತವಾಗಿ ಪಕ್ಷ ಸೇರಿದ ಬಳಿಕ ಮಾತನಾಡುತ್ತಿದ್ದ ಮಧ್ಯೆಯೇ ಕಿವಿ ಹಿಡಿದು ಬಸ್ಕಿ ಹೊಡೆದಿದ್ದಾರೆ. ಈ ಹಿಂದೆ ಟಿಎಂಸಿಯಲ್ಲಿ ಇದ್ದು ಮಾಡಿದ ಪಾಪಗಳಿಗೆ ಪ್ರಾಯಶ್ಚಿತವಾಗಿ ಹೀಗೆ ಮಾಡಿದ್ದೇನೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...