alex Certify BIG NEWS: ಕತ್ತೆ ಸಗಣಿಯಿಂದ ಮಸಾಲಾ ಪದಾರ್ಥ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕತ್ತೆ ಸಗಣಿಯಿಂದ ಮಸಾಲಾ ಪದಾರ್ಥ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ

ನಕಲಿ ಪದಾರ್ಥಗಳನ್ನ ಬಳಸಿ ಕಲಬೆರಕೆ ಮಸಾಲೆ ಪದಾರ್ಥಗಳನ್ನ ಉತ್ಪಾದನೆ ಮಾಡಿದ ಆರೋಪದಡಿಯಲ್ಲಿ ಉತ್ತರ ಪ್ರದೇಶದ ಹತ್ರಾಸ್​ ಜಿಲ್ಲೆಯ ಪೊಲೀಸರು ಮಸಾಲೆ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ.

ಟೈಮ್ಸ್ ಆಫ್​ ಇಂಡಿಯಾದ ವರದಿ ಪ್ರಕಾರ ಕಾರ್ಖಾನೆ ಮಾಲೀಕರಾದ ಅನುಪ್​ ರನ್ನ ಪೊಲೀಸರು ಬಂಧಿಸಿದ್ದು ಕಾರ್ಖಾನೆಯನ್ನ ಸೀಜ್​ ಮಾಡಲಾಗಿದೆ.

ಹತ್ರಾಸ್​ ಜಿಲ್ಲೆಯ ನವೀಪುರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಪೊಲೀಸರು ಖಾರದ ಪುಡಿ, ಗರಂ ಮಸಾಲಾ, ಕೊತ್ತಂಬರಿ ಪುಡಿ, ಅರಿಶಿಣ ಸೇರಿದಂತೆ ಅನೇಕ ಮಸಾಲೆ ಪದಾರ್ಥಗಳನ್ನ ವಶಕ್ಕೆ ಪಡೆದಿದ್ದಾರೆ.

ಈ ಎಲ್ಲ ಮಸಾಲೆ ಪದಾರ್ಥಗಳಿಗೆ ಕತ್ತೆ ಸಗಣಿ, ಕೃತಕ ಬಣ್ಣ, ಹುಲ್ಲು ಹಾಗೂ ಸ್ಥಳೀಯ ಬ್ರ್ಯಾಂಡ್​ಗಳಿಂದ ಕಲಬೆರಕೆ ಮಾಡಲಾಗುತ್ತಿತ್ತು.

ಈ ಕಾರ್ಖಾನೆಯಿಂದ 27 ಮಾದರಿಗಳನ್ನ ಸಂಗ್ರಹಿಸಿರುವ ಪೊಲೀಸರು ಅವೆಲ್ಲವನ್ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪರೀಕ್ಷಾ ವರದಿಯ ಫಲಿತಾಂಶವನ್ನ ಆಧರಿಸಿ ಕಾರ್ಖಾನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...