alex Certify ಜೀವನದ ಕತೆ ಹೇಳಿದ್ರೆ ನಿಮಗೆ ಸಿಗುತ್ತೆ ಹಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದ ಕತೆ ಹೇಳಿದ್ರೆ ನಿಮಗೆ ಸಿಗುತ್ತೆ ಹಣ….!

ಮಹಾರಾಷ್ಟ್ರ ರಾಜ್ಯದ ಪುಣೆಯ 22 ವರ್ಷದ ಇಂಜಿನಿಯರ್​​ ರಾಜ್​ ದಾಗ್ವಾರ್​ ಜನರ ಮನದ ಮಾತನ್ನ ಕೇಳೋಕೆ ಮುಂದಾಗಿದ್ದಾರೆ. ಫರ್ಗುಸನ್​​ ಕಾಲೇಜು ರಸ್ತೆಯ ಮುಂದೆ ನಿಮ್ಮ ಕತೆಯನ್ನ ಹೇಳಿ ನಾನು ನಿಮಗೆ 10 ರೂಪಾಯಿ ಕೊಡುತ್ತೇನೆ ಎಂಬ ಬೋರ್ಡ್​ ಹಿಡಿದು ನಿಂತಿದ್ದಾರೆ.

ಜನರ ಕತೆಯನ್ನ ಕೇಳಬೇಕು ಎಂಬ ಕಾರಣಕ್ಕೆ ರಾಜ್​ ನಿತ್ಯ ಕನಿಷ್ಟ 5 ಗಂಟೆ ಸಮಯವನ್ನ ಫುಟ್​ಪಾತ್​ನಲ್ಲೇ ಕಳೆಯುತ್ತಾರೆ. ಅವರಿಗೆ ಈವರೆಗೆ ಕತೆ ಹೇಳಿದ ಪ್ರತಿಯೊಬ್ಬರ ಹೆಸರನ್ನೂ ರಾಜ್​ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

ನಾನು ಉತ್ತಮ ಕೇಳುಗನಾಗಿದ್ದೇನೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಸ್ಯೆಗಳಿವೆ. ಲಾಕ್​ಡೌನ್​​ನಿಂದಾಗಿ ಅನೇಕರು ಒಂಟಿತನವನ್ನ ಅನುಭವಿಸುತ್ತಿದ್ದಾರೆ. ಅನೇಕರಿಗೆ ತಮ್ಮ ಭಾವನೆಯನ್ನ ಹೊರಗೆ ಹಾಕಿಕೊಳ್ಳಲು ಯಾರೂ ಸಿಗ್ತಿಲ್ಲ. ಇದರಿಂದ ಖಿನ್ನತೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ ಎಂದು ರಾಜ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...