alex Certify ಮನ ಮಿಡಿಯುವಂತಿದೆ ಬೈಕ್​ ಸವಾರನಿಗೆ ಪೊಲೀಸ್ ಅಧಿಕಾರಿ‌ ಮಾಡಿದ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಮಿಡಿಯುವಂತಿದೆ ಬೈಕ್​ ಸವಾರನಿಗೆ ಪೊಲೀಸ್ ಅಧಿಕಾರಿ‌ ಮಾಡಿದ ಮನವಿ

ಪೊಲೀಸರು ಯಾರನ್ನಾದರೂ ಅಡ್ಡ ಹಾಕ್ತಾರೆ ಅಂದರೆ ಅದೇನು ಅಂತಾ ಒಳ್ಳೆಯ ವಿಚಾರವಂತೂ ಅಲ್ಲ. ಆದರೆ ಬೈಕರ್​ ಒಬ್ಬ ಪೊಲೀಸ್​ ತನ್ನ ಅಡ್ಡ ಹಾಕಿದ ಕತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ನೆಟ್ಟಿಗರ ಮನ ತುಂಬಿ ಬಂದಿದೆ.

ಯುಟ್ಯೂಬ್​​​ನಲ್ಲಿ ಆನ್ನಿ ಅರುಣ್​ ಎಂಬ ಚಾನೆಲ್​ ಹೊಂದಿರುವ ವ್ಯಕ್ತಿಯೊಬ್ಬರು ಪಾಂಡಿಚೆರಿಯಿಂದ ತೆಂಕಸಿಗೆ ಬೈಕ್​ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿ ಪೊಲೀಸ್​ ಇವರ ಬೈಕ್​ನ್ನು ಅಡ್ಡಗಟ್ಟಿದ್ದಾರೆ.

ವಿಡಿಯೋದಲ್ಲಿ ಪೊಲೀಸ್​​ ಅಧಿಕಾರಿ ಮೊದಲು ನೀವು ಕರ್ನಾಟಕದವರೇ..? ಎಂದು ಬೈಕರ್​ ಬಳಿ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಬೈಕರ್​ ಹೌದು ಎಂದು ಉತ್ತರ ನೀಡುತ್ತಿದ್ದಂತೆಯೇ ಇದೇ ರಸ್ತೆಯಲ್ಲಿ ಮುಂದೆ ಹೋಗುತ್ತಿರುವ ಬಸ್​ನಲ್ಲಿ ವೃದ್ಧ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದು ಅವರು ತಮ್ಮ ಔಷಧಿ ಬಾಟಲಿಯನ್ನ ಮರೆತಿದ್ದಾರೆ. ಹೀಗಾಗಿ ತಾವು ದಯಮಾಡಿ ಬಸ್​ನ್ನು ಚೇಸ್​ ಮಾಡಿ ಈ ಔಷಧಿ ಬಾಟಲಿಯನ್ನ ಬಸ್​ನಲ್ಲಿರುವ ಮಹಿಳೆಗೆ ಹಸ್ತಾಂತರಿಸಿ ಎಂದು ಹೇಳುತ್ತಾರೆ.

ಪೊಲೀಸರ ಮಾತಿನಂತೆ ಬಸ್​ನ್ನು ಚೇಸ್​ ಮಾಡಿದ ಬೈಕರ್​, ಬಸ್​ನ್ನು ನಿಲ್ಲಿಸುವಂತೆ ಹೇಳಿ ವೃದ್ಧೆಗೆ ಔಷಧಿಯನ್ನ ಹಸ್ತಾಂತರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...