alex Certify ದೃಷ್ಟಿ ದೋಷ ಇರುವ ಚಿರತೆ ದತ್ತು ಪಡೆದ ಟೀನೇಜ್ ಬಾಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೃಷ್ಟಿ ದೋಷ ಇರುವ ಚಿರತೆ ದತ್ತು ಪಡೆದ ಟೀನೇಜ್ ಬಾಲೆ

ದೃಷ್ಟಿ ಸವಾಲಿರುವ ಒಂಬತ್ತು ವರ್ಷದ ಚಿರತೆಯೊಂದನ್ನು ಪಶ್ಚಿಮ ಘಟ್ಟಗಳಿಂದ ರಕ್ಷಿಸಿ ಮುಂಬಯಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಪುನಶ್ಚೇತನಕ್ಕೆ ಇರಿಸಲಾಗಿದೆ.

ಇದೀಗ ಈ ಚಿರತೆಯನ್ನು ಮುಂಬಯಿ ಉಪನಗರದ ಕಲೆಕ್ಟರ್‌ ಮಿಲಂದ್ ಬೋರಿಕರ್‌ರ 17 ವರ್ಷದ ಪುತ್ರಿ ವೇದಾಂಗಿ ದತ್ತು ಪಡೆದಿದ್ದಾಳೆ.

“ಪ್ರಾಣಿಯೊಂದನ್ನು ದತ್ತು ಪಡೆದುಕೊಳ್ಳಲು ನಾವು ನೋಡುತ್ತಿದ್ದೆವು. ಅರಣ್ಯ ಅಧಿಕಾರಿಗಳು ನಮಗೆ ಕೋಯ್ನಾ ಕುರಿತಂತೆ ಹೇಳಿದ ಮೇಲೆ ಆಕೆಯನ್ನು ನಮ್ಮ ಕುಟುಂಬದ ಭಾಗವನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದೆವು. ಆಕೆ ಆರೋಗ್ಯವಾಗಿ ಇರುವುದನ್ನು ನೋಡಲು ಖುಷಿಯಾಗುತ್ತಿದೆ” ಎಂದು ಬೋರಿಕರ್‌ ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ.

2012ರಲ್ಲಿ ಕಬ್ಬಿನ ಗದ್ದೆಯೊಂದಕ್ಕೆ ಬೆಂಕಿ ಇಟ್ಟ ವೇಳೆ ಕೊಯ್ನಾ ಕಣ್ಣುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...