alex Certify ಸೀರಿಯಲ್ ಕಿಲ್ಲರ್ ಹೇಳಿದ ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರಿಯಲ್ ಕಿಲ್ಲರ್ ಹೇಳಿದ ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು…!

ಗುರುಗ್ರಾಮದಲ್ಲಿ ಸತತ ಮೂರು ರಾತ್ರಿಗಳಲ್ಲಿ ಮೂವರನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ 22 ವರ್ಷದ ಯುವಕನನ್ನ ಬಂಧಿಸಲಾಗಿದೆ. ಆರೋಪಿಯನ್ನ ಬಿಹಾರದ ನಿವಾಸಿ ಮೊಹಮ್ಮದ್​ ರಾಜಿ ಎಂದು ಗುರುತಿಸಲಾಗಿದೆ.

ನವೆಂಬರ್​ 23, 24 ಹಾಗೂ 25ರಂದು ತಾನು ಮೂವರನ್ನ ಕೊಂದಿದ್ದೇನೆ ಅಂತಾ ರಾಜಿ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದಾನೆ. ಬಾಲ್ಯದಿಂದಲೂ ಎಲ್ಲರೂ ನನ್ನನ್ನ ನಿಷ್ಪ್ರಯೋಜಕ ಎಂದು ಕರೆಯುತ್ತಿದ್ದರು. ಹೀಗಾಗಿ ತಾನು ಮನಸ್ಸು ಮಾಡಿದ್ರೆ ಏನ್​ ಬೇಕಿದ್ದರೂ ಮಾಡಬಲ್ಲೆ ಅನ್ನೋದನ್ನ ಜಗತ್ತಿಗೆ ತೋರಿಸುವ ಸಲುವಾಗಿ ಅಪರಿಚಿತರನ್ನ ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾನೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈತ ಮೊದಲು ಅಪರಿಚಿತರಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿ ಬಳಿಕ ಇರಿದಿದ್ದಾನೆ ಎಂದು ಹೇಳಿದ್ದಾರೆ.

ನವೆಂಬರ್​ 23ರ ರಾತ್ರಿ ಗುರುಗ್ರಾಮದ ಲೀಜರ್​ ವ್ಯಾಲಿ ಪಾರ್ಕ್​ನಲ್ಲಿ ವ್ಯಕ್ತಿಯನ್ನ ಇರಿದು ಕೊಲೆ ಹಾಗೂ ಮಾರನೇ ದಿನ ರಾತ್ರಿ ಸೆಕ್ಟರ್​ 40ರಲ್ಲಿ ಭದ್ರತಾ ಸಿಬ್ಬಂದಿ ಹತ್ಯೆ ಮತ್ತು ನವೆಂಬರ್​ 25ರಂದು 26 ವರ್ಷದ ರಾಕೇಶ್​ ಕುಮಾರ್​ ಎಂಬವರನ್ನ ಇರಿದು ಕೊಂದಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...