alex Certify ಒಂದೇ ಒಂದು ಟ್ವೀಟ್​ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನ ಕಳೆದುಕೊಂಡ್ರಾ ಸಚಿನ್​ ತೆಂಡೂಲ್ಕರ್..​..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಒಂದು ಟ್ವೀಟ್​ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನ ಕಳೆದುಕೊಂಡ್ರಾ ಸಚಿನ್​ ತೆಂಡೂಲ್ಕರ್..​..?

ಕ್ರಿಕೆಟ್​ ದೇವರು ಎಂದೇ ಹೆಸರು ಗಳಿಸಿರುವ ಸಚಿನ್​ ತೆಂಡೂಲ್ಕರ್​ ಭಾರತದ ಪ್ರತಿಯೊಬ್ಬ ಕ್ರಿಕೆಟ್​ ಅಭಿಮಾನಿಯ ಮನದಲ್ಲೂ ವಿಶೇಷ ಸ್ಥಾನ ಪಡೆದವರು.

ನಿವೃತ್ತಿ ಜೀವನದ ಬಳಿಕವೂ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದ ಸಚಿನ್​ ರೈತ ಪರ ಹೋರಾಟದ ವಿಚಾರದಲ್ಲಿ ಮಾಡಿದ ಒಂದೇ ಒಂದು ಟ್ವೀಟ್​ನಿಂದಾಗಿ ಅಭಿಮಾನಿಗಳನ್ನ ಕಳೆದುಕೊಳ್ತಿದ್ದಾರೆ.

ಪಾಪ್​ ತಾರೆ ರಿಹನ್ನಾ ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವಿಚಾರವಾಗಿ ಟ್ವೀಟ್​ ಮಾಡಿ ನಾವೇಕೆ ಇದರ ಬಗ್ಗೆ ಮಾತನಾಡಬಾರದು..? ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೇ ಪರಿಸರ ಹೋರಾಟಗಾರ್ತಿ ಗ್ರೇಟಾ ಕೂಡ ರೈತರಿಗೆ ಬೆಂಬಲ ಸೂಚಿಸಿ ಟ್ವೀಟಾಯಿಸಿದ್ದರು. ಇದು ಭಾರತೀಯ ಸೆಲೆಬ್ರಿಟಿಗಳನ್ನ ಕೆರಳುವಂತೆ ಮಾಡಿತ್ತು.

ಇದಾದ ಬಳಿಕ ಟ್ವೀಟ್​ ಮಾಡಿದ ಸಚಿನ್​ ತೆಂಡೂಲ್ಕರ್​ ದೇಶದ ಆಂತರಿಕ ಸಮಸ್ಯೆಗಳನ್ನ ಸರಿ ಪಡಿಸೋಕೆ ಬಾಹ್ಯ ಶಕ್ತಿಗಳ ಅವಶ್ಯಕತೆ ಇಲ್ಲ ಎಂದು ಟ್ವೀಟ್​ ಮಾಡಿದ್ದರು. ತೆಂಡೂಲ್ಕರ್​ ಏಕತೆಯ ಸಂದೇಶ ಸಾರಲು ಯತ್ನಿಸಿದ್ದರೂ ಸಹ ಅದು ರೈತ ಪರವಾಗಿ ಮಾತನಾಡಿದ್ದ ರಿಹನ್ನಾಗೆ ಟಾಂಗ್​ ನೀಡಿದ ಟ್ವೀಟ್​ ಆಗಿದ್ದರಿಂದ ಕೃಷಿ ಮಸೂದೆ ವಿರೋಧಿಸುವವರ ಕಣ್ಣು ಕೆಂಪಗಾಗುವಂತೆ ಮಾಡಿತ್ತು.

ಇತ್ತ ಕೇರಳಿಗರು 2014 ಸಂದರ್ಶನವನ್ನ ಇಟ್ಕೊಂಡು ಮಾರಿಯಾ ಶರಪೋವಾ ಬಳಿ ಕ್ಷಮೆ ಯಾಚಿಸ್ತಾ ಇದ್ದರೆ ಇನ್ನೊಂದು ಕಡೆ ಸೋಶಿಯಲ್​ ಮೀಡಿಯಾದಲ್ಲಿ ಸಚಿನ್​ ವಿರುದ್ಧ ಟ್ರೋಲ್​ಗಳ ಸುರಿಮಳೆಯೇ ಹರಿಯುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಸಚಿನ್​ ರೈತರ ವಿರುದ್ಧ ಮಾತನಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಲಾಗ್ತಿದೆ.

— Sachin Tendulkar (@sachin_rt) February 3, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...