ತಿರುವನಂತಪುರಂ: ಕೇರಳದ ಕಣ್ಣೂರಿನಲ್ಲಿ ಚಿನ್ನಾಭರಣ ಮಳಿಗೆ ಬಾಗಿಲು ತೆರೆದ ಮಾಲೀಕ ಬೆಚ್ಚಿಬಿದ್ದಿದ್ದಾರೆ. ಲಾಕ್ಡೌನ್ ಜಾರಿಯಾಗಿದ್ದರಿಂದ 40 ದಿನಗಳ ಕಾಲ ಅಂಗಡಿಯನ್ನು ಬಂದ್ ಮಾಡಲಾಗಿತ್ತು.
ಲಾಕ್ಡೌನ್ ನಿಯಮದಲ್ಲಿ ಸಡಿಲಿಕೆಯಾಗಿದ್ದರಿಂದ ಚಿನ್ನಾಭರಣ ಮಳಿಗೆಯನ್ನು ಓಪನ್ ಮಾಡಿದ ಮಾಲಿಕನಿಗೆ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಅಲ್ಲದೆ 22 ಮೊಟ್ಟೆಗಳನ್ನು ಕೂಡ ಇಟ್ಟಿರುವುದು ಕಂಡುಬಂದಿದೆ.
ಹಾವನ್ನು ಕಂಡ ಮಾಲೀಕ ಗಾಬರಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿ ಬಂದ ಅಧಿಕಾರಿಗಳು, ಉರಗ ರಕ್ಷಕರು ಹೆಬ್ಬಾವು ಹಾಗೂ ಮೊಟ್ಟೆಗಳನ್ನು ರಕ್ಷಿಸಿದ್ದಾರೆ.