alex Certify ಕಾಂಗ್ರೆಸ್​ ಬಿಕ್ಕಟ್ಟು ನಿವಾರಣೆಗೆ ಅಹ್ಮದ್​ ಪಟೇಲ್​ ಹಾದಿ ತುಳಿದ ಪ್ರಿಯಾಂಕ ಗಾಂಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್​ ಬಿಕ್ಕಟ್ಟು ನಿವಾರಣೆಗೆ ಅಹ್ಮದ್​ ಪಟೇಲ್​ ಹಾದಿ ತುಳಿದ ಪ್ರಿಯಾಂಕ ಗಾಂಧಿ

ಕಾಂಗ್ರೆಸ್​ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ಕಲಹ ನಿವಾರಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇತುವೆಯಾಗಿದ್ದಾರೆ. ಪಕ್ಷದಲ್ಲಿರುವ ಅಂತಃಕಲಹ ನಿವಾರಣೆಗೆ ಹೊಸ ಪ್ಲಾನ್​ ಮಾಡಿರುವ ಪ್ರಿಯಾಂಕಾ ಗಾಂಧಿ ಕೊರೊನಾದಿಂದ ಒಂದು ತಿಂಗಳ ಹಿಂದಷ್ಟೇ ನಿಧನರಾದ ಅಹ್ಮದ್​ ಪಟೇಲ್​ರ ಹಾದಿಯನ್ನ ತುಳಿಯುತ್ತಿದ್ದಾರೆ. ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಅಹ್ಮದ್​ ಪಟೇಲ್​​ ಕಾಂಗ್ರೆಸ್​ನಲ್ಲಿ ಉಂಟಾಗಿದ್ದ ಸಾಕಷ್ಟು ಭಿನ್ನಾಭಿಪ್ರಾಯಗಳನ್ನ ಶಮನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಗಸ್ಟ್​ನಲ್ಲಿ ನಡೆದ ಸಿಡಬ್ಲೂಸಿ ಮೀಟಿಂಗ್​ ಬಳಿಕ ಕಾಂಗ್ರೆಸ್​ನ ಅಂತಃಕಲಹ ಬೆಳಕಿಗೆ ಬಂದಿತ್ತು. ಕಾಂಗ್ರೆಸ್​ ನಾಯಕತ್ವ ಬದಲಾವಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರೋದು ತಿಳಿದಿತ್ತಾದರೂ ಯಾರೂ ಕೂಡ ಈ ವೈಮನಸ್ಸನ್ನ ಸರಿ ಮಾಡುವತ್ತ ಮುಂದಡಿ ಇಟ್ಟಿರಲಿಲ್ಲ. ಆದರೆ ಇದೀಗ ಪ್ರಿಯಾಂಕ ಬಿಕ್ಕಟ್ಟು ಪರಿಹಾರಕ್ಕೆ ಹೆಜ್ಜೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕ ಗಾಂಧಿ ಕಳೆದ ತಿಂಗಳು ಜಿ – 23 ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಿ ಅಂತರ ನಿವಾರಣೆಗೆ ಪ್ರಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ. ಸಿಡಬ್ಲೂಸಿ ಸಭೆಯಲ್ಲಿ ಅಹ್ಮದ್​ ಪಟೇಲ್​ರಿಗೆ ಶ್ರದ್ದಾಂಜಲಿ ಸಲ್ಲಿಸುವುದರ ಜೊತೆಗೆ ಹಳೆಯ ಭಿನ್ನಾಭಿಪ್ರಾಯಗಳನ್ನ ಮರೆಯುವಂತೆ ಮನವಿ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಪ್ರಯತ್ನದ ಫಲವಾಗಿ ಶನಿವಾರ ಕಾಂಗ್ರೆಸ್​ ನಾಯಕರು ಸಭೆಗೆ ಹಾಜರಾಗಿದ್ದಾರೆ. ಈ ಸಭೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಭಾಗಿಯಾಗಿದ್ರು. ಸಭೆಯಲ್ಲಿ ಪಕ್ಷದ ಸಮತೋಲವನ್ನ ಮರಳಿ ತರುವಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...