alex Certify ಸಾಲಗಾರರ ಕಾಟದಿಂದ ಪಾರಾಗೋಕೆ ಈ ಉದ್ಯಮಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲಗಾರರ ಕಾಟದಿಂದ ಪಾರಾಗೋಕೆ ಈ ಉದ್ಯಮಿ ಮಾಡಿದ್ದೇನು ಗೊತ್ತಾ…?

ಸಾಲಗಾರರಿಂದ ತಪ್ಪಿಸಿಕೊಳ್ಳೋಕೆ ಉದ್ಯಮಿಯೊಬ್ಬ ಕೃಷಿ ಮಸೂದೆ ಖಂಡಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವೇಷ ಮರೆಸಿಕೊಂಡು ಭಾಗಿಯಾಗಿದ್ದು ಈತನನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಉತ್ತರ ಪ್ರದೇಶದ ಮುರಾದ್​ ನಗರದ ನಿವಾಸಿ ಪ್ರವೀಣ್​ ಡಿಸೆಂಬರ್​ 1ರಂದು ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರು ಗಾಜಿಪುರ-ಗಾಜಿಯಾಬಾದ್​​ ಗಡಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಪ್ರವೀಣ್​ ಮನೆಯಿಂದ ನಾಪತ್ತೆಯಾಗಿದ್ದರು. ಆದರೆ ಕೆಲ ದಿನಗಳ ಬಳಿಕ ಮನೆಗೆ ವಾಪಸ್ಸಾಗಿದ್ದರು. ಹೀಗಾಗಿ ಈ ಬಾರಿಯೂ ಪ್ರವೀಣ್​ ವಾಪಸ್ಸಾಗ್ತಾರೆ ಅಂತಾ ಡಿಸೆಂಬರ್​ 12ನೇ ತಾರೀಖಿನವರೆಗೂ ಕುಟುಂಬಸ್ಥರು ದೂರು ನೀಡಿರಲಿಲ್ಲ. ದೂರು ದಾಖಲಾಗುತ್ತಿದ್ದಂತೆ ಪ್ರವೀಣ್​ ಮೊಬೈಲ್​ ಟ್ರ್ಯಾಕ್​ ಮಾಡಿದ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಸಿಖ್​ರಂತೆ ಗಡ್ಡ ಬೆಳೆಸಿದ್ದ ಪ್ರವೀಣ್​​ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅವರ ಕಾರನ್ನ ನೋಡಿ ಪತ್ತೆ ಹಚ್ಚಿದ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ ವೇಳೆ ಸಾಲಗಾರರಿಂದ ತಪ್ಪಿಸಿಕೊಳ್ಳೋಕೆ ವೇಷ ಮರೆಸಿಕೊಂಡಿದ್ದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...