alex Certify ಕೊರೋನಾ ಸೇವೆಯೇ ಸಂಘಟನೆ ಅಭಿಯಾನ: ಕಾರ್ಯಕರ್ತರೊಂದಿಗೆ ಮೋದಿ ಮಹತ್ವದ ಸಭೆ: BSY, ನಳಿನ್ ಕುಮಾರ್ ಕಟೀಲ್ ಭಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಸೇವೆಯೇ ಸಂಘಟನೆ ಅಭಿಯಾನ: ಕಾರ್ಯಕರ್ತರೊಂದಿಗೆ ಮೋದಿ ಮಹತ್ವದ ಸಭೆ: BSY, ನಳಿನ್ ಕುಮಾರ್ ಕಟೀಲ್ ಭಾಗಿ

ಸೇವೆಯೇ ಸಂಘಟನೆ ಅಭಿಯಾನ ಕುರಿತ ಅವಲೋಕನ ಸಭೆ ನಡೆದಿದ್ದು ವಿಡಿಯೋ ಸಂವಾದದ ಮೂಲಕ ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ.

ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಭೆ ನಡೆಸಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗಿಯಾಗಿದ್ದಾರೆ.

ಇವರೊಂದಿಗೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವ ಆರ್. ಅಶೋಕ್ ಮತ್ತು ಶಾಸಕ ಅರವಿಂದ ಲಿಂಬಾವಳಿ ಭಾಗಿಯಾಗಿದ್ದಾರೆ. ಕೊರೋನಾ ನಿರ್ವಹಣೆ, ಜಾಗೃತಿ, ಸರ್ಕಾರಗಳಿಗೆ ಬೆಂಬಲ ಹಾಗೂ ಕೈಗೊಂಡ ಅಭಿಯಾನದ ವಿವರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಕಾರ್ಯಕರ್ತರೊಂದಿಗೆ ಮಾತನಾಡಿದ ಮೋದಿ ನಮ್ಮ ಕಾರ್ಯಕರ್ತರು, ಕಾರ್ಮಿಕರು ಅಪಾಯವನ್ನು ಲೆಕ್ಕಿಸದೇ ಜನರ ಸೇವೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ ಗೌರವ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...