alex Certify ಕೊರೊನಾ ಮುಕ್ತ ಗ್ರಾಮ ನಿರ್ಮಾಣಕ್ಕೆ ಶಪಥ ಮಾಡಲು ಮೋದಿ ಕರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮುಕ್ತ ಗ್ರಾಮ ನಿರ್ಮಾಣಕ್ಕೆ ಶಪಥ ಮಾಡಲು ಮೋದಿ ಕರೆ

ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಡಿಸಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಮಹತ್ವದ ಕಿವಿಮಾತನ್ನ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಪ್ರಧಾನಿ ಮೋದಿ ಪ್ರತಿಯೊಂದು ಗ್ರಾಮವೂ ಕೊರೊನಾದಿಂದ ಮುಕ್ತ ಮಾಡಬೇಕು ಎಂಬ ಶಪಥವನ್ನ ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು ಎಂದು ಹೇಳಿದ್ರು.

ಡಿಸಿಗಳು ಫೀಲ್ಡ್​ ಕಮಾಂಡರ್​ಗಳಂತೆ ಕೆಲಸ ಮಾಡಬೇಕಿದೆ. ಕೋವಿಡ್​ 19 ನಿಯಂತ್ರಣದ ಜೊತೆಯಲ್ಲಿ ಜನರ ಜೀವನ ನಿರ್ವಹಣೆಯಲ್ಲೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಕೊರೊನಾ ತುತ್ತತುದಿಯನ್ನ ತಲುಪಿ ಇದೀಗ ಇಳಿಕೆ ಕಾಣುತ್ತಿದೆ. ಪ್ರತಿ ವ್ಯಕ್ತಿಯ ಜೀವ ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಟ ನಡೆಸಬೇಕು ಎಂದು ಹೇಳಿದ್ರು.

ಮಳೆಗಾಲ ಇರೋದ್ರಿಂದ ಆಸ್ಪತ್ರೆಗಳಲ್ಲಿ ವಿದ್ಯುತ್​ ಸಮಸ್ಯೆ ಉಂಟಾಗಬಹುದು. ಆಕ್ಸಿಜನ್​ ಸಮಸ್ಯೆ ಉಂಟಾಗಬಹುದು. ಇವೆಲ್ಲವನ್ನ ಎದುರಿಸಲು ನೀವು ಸದೃಢ ಆಗಬೇಕಿದೆ. ನಿಮ್ಮ ಜಿಲ್ಲೆಯ ಸವಾಲು ಏನು ಅನ್ನೋದು ನಿಮಗೆ ತಿಳಿದಿರುತ್ತೆ. ಇದನ್ನೆಲ್ಲ ಸರಿಯಾಗಿ ಮ್ಯಾಪ್​ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ರು.

ಕೃಷಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಲಾಕ್​ಡೌನ್​ ಇರೋದಿಲ್ಲ. ಕೃಷಿ ಭೂಮಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿದ್ರು. ಅಲ್ಲದೇ ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್​ ಪ್ಲಾಂಟ್​ಗಳನ್ನ ಕೇಂದ್ರ ಸರ್ಕಾರ ನಿರ್ಮಿಸಲಿದೆ ಎಂದು ಇದೇ ವೇಳೆ ಅಭಯ ನೀಡಿದ್ರು.

ಕೊರೊನಾ ಲಸಿಕೆ ವಿಚಾರವಾಗಿಯೂ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅನೇಕ ಕಡೆ ಲಸಿಕೆ ಪೋಲಾಗಿದೆ. ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ. 15 ದಿನಗಳ ಮುಂಚಿತವಾಗಿಯೇ ರಾಜ್ಯಗಳು ಲಸಿಕೆ ಲಭ್ಯತೆ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಬೇಕು. ನಿಮ್ಮ ರಾಜ್ಯಗಳ ಸಿಎಂಗಳ ಮಾರ್ಗದರ್ಶನದೊಂದಿಗೆ ಡಿಸಿಗಳು ಕೊರೊನಾ ವಿರುದ್ಧ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...