alex Certify ಆಷಾಢ ಪೂರ್ಣಿಮೆ ಅಂಗವಾಗಿ ಮೋದಿ ಮಾತು: ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಷಾಢ ಪೂರ್ಣಿಮೆ ಅಂಗವಾಗಿ ಮೋದಿ ಮಾತು: ಮಹತ್ವದ ಮಾಹಿತಿ

ನವದೆಹಲಿ: ಆಷಾಢ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ಗುರುಗಳನ್ನು ಸ್ಮರಿಸುವ ದಿನವೇ ಗುರುಪೂರ್ಣಿಮೆಯಾಗಿದೆ ಎಂದು ಹೇಳಿದ್ದಾರೆ.

ಭಗವಾನ್ ಬುದ್ಧ ದೇಶಕ್ಕೆ ಶಾಂತಿ ಸಂದೇಶ ಸಾರಿದರು. ಬೌದ್ಧ ಧರ್ಮ ಶಾಂತಿ, ಅಹಿಂಸೆ ಸಂದೇಶವನ್ನು ಸಾರಿದೆ. 21ನೇ ಶತಮಾನ ಆಶಾದಾಯಕ ಶತಮಾನವಾಗಿದೆ. ಜಾಗತಿಕ ಸಮಸ್ಯೆಗಳಿಗೆ ಯುವಶಕ್ತಿಯಿಂದ ಪರಿಹಾರ ಸಿಗಲಿದೆ. ಬೌದ್ಧ ಸ್ಥಳಗಳ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜಗತ್ತು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಬುದ್ಧನ ಆದರ್ಶಗಳು ಶಾಶ್ವತ ಪರಿಹಾರವಾಗಿವೆ. ಈ ಹಿಂದೆಯೂ ವರ್ತಮಾನದಲ್ಲಿಯೂ ಪ್ರಸ್ತುತವಾಗಿದೆ. ಅವರ ಆದರ್ಶಗಳು ಭವಿಷ್ಯದಲ್ಲಿಯೂ ಪ್ರಸ್ತುತವಾಗುತ್ತವೆ ಎಂದು ಆಷಾಢ ಪೂರ್ಣಿಮೆ ದಿನ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...