ಶಿವ ತಾಂಡವ ಸ್ತೋತ್ರವನ್ನು ಹೇಳುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಹಳ ವೈರಲ್ ಆಗಿದ್ದಾರೆ. ಮಧ್ಯ ಪ್ರದೇಶದ ಭೋಜ್ಪುರದ ಕಾಳಿಚರಣ್ ಮಹಾರಾಜ್ ಎಂಬುವವರು ಈ ಸ್ತೋತ್ರವನ್ನು ಪಠಿಸಿದ್ದಾರೆ.
ಟ್ವಿಟರ್ನಲ್ಲಿ ಈ ವಿಡಿಯೋವನ್ನು ಲೇಖಕ ಅಮಿಶ್ ತ್ರಿಪಾಠಿ ಶೇರ್ ಮಾಡಿಕೊಂಡಿದ್ದು, ಅದೀಗ ಮೂರು ಲಕ್ಷಕ್ಕೂ ಹೆಚ್ಚು ವೀವ್ಸ್ಗಳನ್ನು ಗಿಟ್ಟಿಸಿದೆ.
ಪರಮೇಶ್ವರನ ಪರಮ ಭಕ್ತರಾದ ಇವರ ದನಿಯು ಬಹಳ ಪವರ್ಫುಲ್ ಆಗಿದ್ದು, ಭಕ್ತಿಯ ಆಳದಲ್ಲಿ ಅವರಿಂದ ಈ ಪದಗಳು ಹೊಮ್ಮಿವೆ ಎಂದು ತ್ರಿಪಾಠಿ ತಿಳಿಸಿದ್ದಾರೆ.
ಸಂಸ್ಕೃತ ಶ್ಲೋಕವಾದ ಶಿವ ತಾಂಡವ ಸ್ತೋತ್ರವು ಪರಮೇಶ್ವರನ ಬಲ ಹಾಗೂ ಸೌಂದರ್ಯವನ್ನು ವಿವರಿಸುತ್ತದೆ. ಶಿವನ ಪರಮ ಭಕ್ತನಾಗಿದ್ದ ರಾವಣ ಈ ಶ್ಲೋಕವನ್ನು ಭಜಿಸುತ್ತಿದ್ದ ಎಂದು ಹೇಳಲಾಗುತ್ತದೆ.