ನವದೆಹಲಿ: ಕೊರೊನಾ ಬಿಕ್ಕಟ್ಟಿನ ಪರಿಣಾಮ ಕೇಂದ್ರ ಸರ್ಕಾರ ಪಿಂಚಣಿ ಸ್ಥಗಿತಗೊಳಿಸುತ್ತದೆ ಎನ್ನುವ ವದಂತಿ ಹರಿದಾಡಿದ್ದು ಈ ಕುರಿತಾಗಿ ಕೇಂದ್ರದಿಂದ ಸ್ಪಷ್ಟನೆ ನೀಡಲಾಗಿದೆ.
ಪಿಂಚಣಿ ಕಡಿತಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ. ಈ ಕುರಿತ ಚಿಂತನೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪಿಂಚಣಿ ಕಡಿತಗೊಳಿಸಲಾಗುತ್ತದೆ, ಇಲ್ಲವೇ ಸ್ಥಗಿತಗೊಳಿಸಲಾಗುತ್ತದೆ ಎಂದು ವದಂತಿ ಹರಡಿವೆ.
ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿ ಪಿಂಚಣಿ ಕಡಿತಗೊಳಿಸುವ ಅಥವಾ ಸ್ಥಗಿತಗೊಳಿಸುವ ಯಾವುದೇ ಚಿಂತನೆ ನಡೆಸಿಲ್ಲ ಎಂದು ಹೇಳಿದೆ. ಕೇಂದ್ರ ಸರ್ಕಾರದ ಸುಮಾರು 65.26 ಲಕ್ಷ ಪಿಂಚಣಿದಾರರು ಇದ್ದು ಇವರೆಲ್ಲರಿಗೂ ಪಿಂಚಣಿ ಕಡಿತ ಇಲ್ಲವೆಂದು ಪಿಂಚಣಿದಾರರ ಕಲ್ಯಾಣ ಇಲಾಖೆ ಹೇಳಿದೆ.