ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶೇಷ ಪ್ಯಾಕೇಜ್ ನಲ್ಲಿ ನೀಡಲಾದ ಆರ್ಥಿಕ ನೆರವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ 15,000 ಕೋಟಿ ರೂಪಾಯಿ ನೀಡಲಾಗಿದೆ. ಆರೋಗ್ಯ, ನರೇಗಾ, ಉದ್ಯಮ, ಉದ್ಯಮ ಸರಳಿಕರಣ ಶಿಕ್ಷಣ, ಸಾರ್ವಜನಿಕ ವಲಯದ ನೀತಿಗಳಿಗೆ ನೆರವು ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಶ್ರಮಿಕ್ ವಿಶೇಷ ರೈಲುಗಳಿಗೆ ಕೇಂದ್ರ ಸರ್ಕಾರದಿಂದ ಶೇಕಡ 85 ರಷ್ಟು ಹಣ ಪಾವತಿಸಲಾಗುತ್ತದೆ. ರೈಲಿನಲ್ಲಿ ಊಟದ ವ್ಯವಸ್ಥೇ ಕಲ್ಪಿಸಲಾಗಿದೆ. ಪಿಪಿಇ ಕಿಟ್, ಮಾಸ್ಕ್ ಖರೀದಿಗೆ 3800 ಕೋಟಿ ರೂಪಾಯಿ, ಜನ್ ಧನ್ ಖಾತೆಗೆ 10,025 ಕೋಟಿ ರೂಪಾಯಿ, ರೈತರ ಖಾತೆಗೆ 16,394 ಕೋಟಿ ರೂಪಾಯಿ, ಉಚಿತ ಸಿಲಿಂಡರ್ ಗಳಿಗೆ 6.81 ಕೋಟಿ ರೂಪಾಯಿ, ನೌಕರರಿಗೆ ಇಪಿಎಫ್ ಹಣ 3,600 ಕೋಟಿ ರೂಪಾಯಿ, ಕಟ್ಟಡ ಕಾರ್ಮಿಕರಿಗೆ 3950 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ ಘೋಷಿಸಲಾಗಿದೆ. ಆನ್ಲೈನ್ ಎಜುಕೇಶನ್ ಅನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದ್ದು ಆನ್ಲೈನ್ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ವಾಹಿನಿಗಳನ್ನು ಆರಂಭಿಸಲಾಗುತ್ತಿದೆ, ತಾಂತ್ರಿಕತೆ, ಸೋಷಿಯಲ್ ಮೀಡಿಯಾ ಬಳಸಿಕೊಂಡು ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ನೀಡಲಾಗುವುದು. ಕಂಪನಿಗಳಲ್ಲಿ ಆನ್ಲೈನ್ ವಾರ್ಷಿಕ ಸಾಮಾನ್ಯ ಸಭೆಗೆ ಅವಕಾಶ ನೀಡಲಾಗಿದೆ.