alex Certify ಲಾಕ್ಡೌನ್ ವೇಳೆಯಲ್ಲೇ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ: ದೃಶ್ಯ ಕಂಡು ದಂಗಾದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ಡೌನ್ ವೇಳೆಯಲ್ಲೇ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ: ದೃಶ್ಯ ಕಂಡು ದಂಗಾದ ಪೊಲೀಸರು

ನವದೆಹಲಿ: ಪಶ್ಚಿಮ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ಸೊಸೆಯೇ ಅತ್ತೆ, ಮಾವನನ್ನು ಹತ್ಯೆ ಮಾಡಿದ್ದಾಳೆ. 61 ವರ್ಷದ ರಾಜ್ ಸಿಂಗ್ ಮತ್ತು 58 ವರ್ಷದ ಓಂವತಿ ಮೃತಪಟ್ಟವರು. ಸೊಸೆ ಕವಿತಾ ಅತ್ತೆ ಮಾವನನ್ನು ಕೊಲೆ ಮಾಡಿದ್ದು ಆಕೆಯ ಪತಿ ಸತೀಶ್ ಸಿಂಗ್ ಕೈವಾಡವೂ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕವಿತಾ ಅತ್ತೆ, ಮಾವನನ್ನು ಕೊಲೆ ಮಾಡಿದ ಸಂದರ್ಭದಲ್ಲಿ ಪತಿ, ಇಬ್ಬರು ಮಕ್ಕಳು ಮನೆಯಲ್ಲೇ ಇದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕವಿತಾ ಅತ್ತೆ ಮಾವನೊಂದಿಗೆ ಜಗಳವಾಡಿದ್ದಾಳೆ. ಬಳಿಕ ಅವರ ಕತ್ತು ಹಿಸುಕಿ ಕೊಲೆ ಮಾಡಿ ಚಾಕುವಿನಿಂದ ಮುಖ ಕೊಯ್ದು ಹಾಕಿದ್ದಾಳೆ. ಮೃತ ದಂಪತಿಯ ಮಗ ಸತೀಶ್ ಸಿಂಗ್ ಕೂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ಕಂಟ್ರೋಲ್ ರೂಂಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ನಡೆದ ಸಂದರ್ಭದಲ್ಲಿ ಸತೀಶ್ ಸಿಂಗ್, ಕವಿತಾ ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿ ಇದ್ದರು ಎನ್ನುವುದು ಗೊತ್ತಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...