alex Certify ಕೊರೊನಾ ಲಸಿಕೆ ಸ್ವೀಕರಿಸಿದ ವೈದ್ಯನ ಆರೋಗ್ಯದಲ್ಲಿ ಏರುಪೇರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಸ್ವೀಕರಿಸಿದ ವೈದ್ಯನ ಆರೋಗ್ಯದಲ್ಲಿ ಏರುಪೇರು..!

ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ತಲೆ ತಿರುಗುವಿಕೆ, ಜ್ವರ, ನಿರ್ಜಲೀಕರಣ ಹಾಗೂ ದೌರ್ಬಲ್ಯದಿಂದ ಬಳಲುತ್ತಿದ್ದ ಮುಂಬೈ ವೈದ್ಯರನ್ನ ವಿ.ಎನ್.​ ದೇಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ವಿ.ಎನ್.​ ದೇಸಾಯಿ ಆಸ್ಪತ್ರೆಗೆ ದಾಖಲಾಗಿರುವ ಡಾ. ಜಯ್​ ರಾಜ್​ ಆಚಾರ್ಯ ಜನವರಿ 16ರಂದು ಲಸಿಕೆ ಸ್ವೀಕರಿಸಿದ್ದರು. ಲಸಿಕೆ ಸ್ವೀಕರಿಸಿದ 24 ಗಂಟೆಗಳಲ್ಲಿ ಡಾ. ಆಚಾರ್ಯಗೆ ಪ್ರತಿಕೂಲ ಲಕ್ಷಣ ಕಾಣಿಸಿದೆ. ಜ್ವರ ಹಾಗೂ ತಲೆ ತಿರುಗುವಿಕೆಯಿಂದ ಬಳಲಿದ ವೈದ್ಯರನ್ನ ವಿ.ಎನ್​. ದೇಸಾಯಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು.

ಇನ್ನು ಈ ವಿಚಾರವಾಗಿ ಮಾತನಾಡಿದ ನಗರಸಭೆ ಹೆಚ್ಚುವರಿ ಆಯುಕ್ತ ಸುರೇಶ್​ ಕಾಕಾನಿ, ಲಸಿಕೆ ಸ್ವೀಕರಿಸಿದ ಬಳಿಕ ವೈದ್ಯರು ಪ್ರತಿಕೂಲ ಲಕ್ಷಣಗಳನ್ನ ಅನುಭವಿಸಿದ್ದಾರೆ. ಹೀಗಾಗಿ ಅವರನ್ನ ಮುಂಜಾಗ್ರತಾ ಕ್ರಮವಾಗಿ ಐಸಿಯುವಿನಲ್ಲಿ ಇರಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಅಂತಾ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...