alex Certify ಪತ್ನಿ ಶೀಲ ಶಂಕಿಸಿ ಆಕೆ ಕೈಗಳನ್ನೇ ತುಂಡರಿಸಿದ ಪಾಪಿ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಶೀಲ ಶಂಕಿಸಿ ಆಕೆ ಕೈಗಳನ್ನೇ ತುಂಡರಿಸಿದ ಪಾಪಿ ಪತಿ….!

ಪತ್ನಿ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿ ಆಕೆಯ ಕೈಗಳನ್ನೇ ಕತ್ತರಿಸಿದ ಅಮಾನವೀಯ ಘಟನೆ ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆಯನ್ನ ಭೋಪಾಲ್​​ನ ಹಿಮಿದಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಬರೋಬ್ಬರಿ 9 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಆಕೆಯ ಕೈಗಳನ್ನ ಜೋಡಿಸಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಪ್ರತಿಕ್ರಿಯೆ ನೀಡಿದ ವೈದ್ಯರು ಇನ್ನೊಂದು ನಾಲ್ಕೈದು ದಿನಗಳಲ್ಲಿ ಆಕೆಯ ಕೈಗಳು ಕೆಲಸ ಮಾಡುತ್ತವೆಯೋ ಇಲ್ಲವೋ ಅನ್ನೋದು ತಿಳಿಯಲಿದೆ ಎಂದು ಹೇಳಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಈ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಸೋಮವಾರ ಕಟ್ಟಿಗೆ ತರುವ ನೆಪದಲ್ಲಿ ಪತಿ ರಣಧೀರ್​ ಆಕೆಯನ್ನ ಕಾಡಿಗೆ ಕರೆದೊಯ್ದಿದ್ದ ಎನ್ನಲಾಗಿದೆ. ಕಾಡಿಗೆ ಹೋಗುವ ಮಾರ್ಗಮಧ್ಯದಲ್ಲಿ ಕೊಡಲಿಯಿಂದ ಆಕೆಯ ಕೈಗಳನ್ನ ಕತ್ತರಿಸಿ ಸ್ಥಳದಿಂದ ಕಾಲ್ಕಿತ್ತಿದ್ದ.

ಆರೋಪಿಗಳನ್ನು ಹಿಡಿಯಲು ಹೋದ ಸಬ್ ಇನ್ಸ್ ಪೆಕ್ಟರ್ ಹತ್ಯೆ

ಮದುವೆಯಾಗಿ 15 ದಿನಕ್ಕೆ ರಣಧೀರ್​ ತನ್ನ ಪತ್ನಿ ಪರ ಪುರುಷನ ಜೊತೆ ಮಾತನಾಡುತ್ತಿದ್ದಾಳೆ ಎಂದು ರಣಧೀರ್​ ಅನುಮಾನ ಪಡೋಕೆ ಶುರು ಮಾಡಿದ್ದ . ಈ ಬಗ್ಗೆ ಪತ್ನಿಯ ಕುಟುಂಬಸ್ಥರ ಜೊತೆಯೂ ಮಾತನಾಡೋಕೆ ಹೋಗಿದ್ದ. ಆದರೆ ಆಕೆ ಮನೆಯವರ ವಿರೋಧ ಕಟ್ಟಿಕೊಂಡು ಈ ಮದುವೆಯಾಗಿದ್ದರಿಂದ ಆಕೆ ನಮ್ಮ ಪಾಲಿಗೆ ಸತ್ತಿದ್ದಾಳೆ ಎಂದು ಹೇಳಿದ್ದರು ಎನ್ನಲಾಗಿದೆ.

ಸದ್ಯ ಸಂತ್ರಸ್ತೆಯನ್ನ ಆಕೆಯ ಪತಿಯ ತಂದೆ ನಾರಾಯಣ್​ ಸಿಂಗ್​ ನೋಡಿಕೊಳ್ಳುತ್ತಿದ್ದಾರೆ. ಮಗನ ಈ ಕೃತ್ಯದ ಬಳಿಕ ಆತನನ್ನ ನಾನು ಎಂದಿಗೂ ಮಗನೆಂದು ಸ್ವೀಕರಿಸೋದಿಲ್ಲ ಎಂದು ನಾರಾಯಣ್​ ಸಿಂಗ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...