ನವದೆಹಲಿ: ಜೂನ್ 5 ರೊಳಗೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರದೇಶವನ್ನು ತಲುಪಲಿದ್ದು ಜೂನ್ 20 ರೊಳಗೆ ಮುಂಬೈ ತಲುಪುವ ಸಾಧ್ಯತೆ ಇದೆ.
ಈಗಾಗಲೇ ಮುಂಗಾರು ಪೂರ್ವ ಮಳೆ ವಾತಾವರಣ ಮುಂದುವರೆದಿದ್ದು ಜೂನ್ 1 ರಿಂದ 5 ರ ನಡುವೆ ನೈಋತ್ಯ ಮುಂಗಾರು ಮಾರುತಗಳು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಮಾರುತಗಳು ಮುಂದುವರೆದು ಜೂನ್ 20ರ ವೇಳೆಗೆ ಮುಂಬೈ ತಲುಪುವ ಸಾಧ್ಯತೆಯಿದೆ.
ಭಾರತ ಈ ಬಾರಿ ಗರಿಷ್ಠ ಉಷ್ಣಾಂಶ ಕಂಡಿದೆ. ಕಳೆದ ಎರಡು ದಿನಗಳ ಅವಧಿಯಲ್ಲಿ 47.6 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ. ಮೇ 28 ರಿಂದ ತಾಪಮಾನ ಶಾಖದ ಪ್ರಮಾಣ ಕಡಿಮೆಯಾಗಲಿದ್ದು, ಮೇ 29 ರಿಂದ ಗುಡುಗು ಸಹಿತ ಮಳೆ ಆರಂಭವಾಗಲಿದೆ. ಜೂನ್ 5ರ ವೇಳೆಗೆ ನೈಋತ್ಯ ಮುಂಗಾರು ಮಾರುತಗಳು ಕೇರಳ ತೀರವನ್ನು ಪ್ರವೇಶಿಸುತ್ತವೆ ಎಂದು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರದ ಮುಖ್ಯಸ್ಥ ರಾಜೇಂದ್ರ ಕುಮಾರ್ ಹೇಳಿದ್ದಾರೆ.