ನವದೆಹಲಿ: ನಿರೀಕ್ಷೆಗೂ ಮೊದಲೇ ನೈರುತ್ಯ ಮುಂಗಾರು ಮಾರುತಗಳು ಕೇರಳ ಕರಾವಳಿಯನ್ನು ಪ್ರವೇಶಿಸಿವೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ಈ ಕುರಿತು ಮಾಹಿತಿ ನೀಡಿದ್ದು, ಗಾಳಿಯ ಒತ್ತಡ, ವೇಗ ಹವಾಮಾನ ಪೂರಕವಾದ ವಾತಾವರಣ ಸೃಷ್ಟಿಸಿದ ಹಿನ್ನೆಲೆಯಲ್ಲಿ ನೈಋತ್ಯ ಮುಂಗಾರು ಮಾರುತಗಳು ಮೇ 28 ರಂದೇ ಕೇರಳಕ್ಕೆ ಪ್ರವೇಶಿಸಿವೆ ಎಂದು ಹೇಳಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಜೂನ್ 1 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ತಿಳಿಸಿತ್ತು. ಆದರೆ ನಿರೀಕ್ಷೆಗೂ ಮೊದಲೇ ಮೇ 28 ರಂದು ಮುಂಗಾರು ಕೇರಳಕ್ಕೆ ಪ್ರವೇಶಿಸಿದೆ ಎಂದು ಸ್ಕೈಮೇಟ್ ಹೇಳಿದೆ. ಮುಂಗಾರು ಪೂರ್ವದಲ್ಲಿ ಕೆಲವಡೆ ಮಳೆಯಾಗುತ್ತಿದೆ. ಇದನ್ನೇ ಮುಂಗಾರು ಆರಂಭವಾಗಿದೆ ಎಂದು ಘೋಷಿಸಲು ಆಗುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಬಿತ್ತನೆ ಕಾರ್ಯಕ್ಕೆ ರೆಡಿಯಾದ ರೈತರಿಗೆ ಈಗಾಗಲೇ ಮಳೆಯಾಗುತ್ತಿರುವುದರಿಂದ ಸಂತಸ ತಂದಿದೆ.