alex Certify ತಾನು ದಾಖಲಾದ ಆಸ್ಪತ್ರೆ ನೆಲ ಒರೆಸಿದ ಸಚಿವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾನು ದಾಖಲಾದ ಆಸ್ಪತ್ರೆ ನೆಲ ಒರೆಸಿದ ಸಚಿವ….!

ಕೊರೊನಾ ಸೋಂಕು ಜನಸಾಮಾನ್ಯರು, ಸೆಲೆಬ್ರಿಟಗಳು, ನಾಯಕರೆನ್ನದೇ ಎಲ್ಲರನ್ನೂ ಕಾಡುತ್ತಿದೆ. ರಾಜಕಾರಣಿಗಳಿಗೆ ಕೊರೊನಾ ಬಂದರೆ ವಿಐಪಿ ಟ್ರೀಟ್​ಮೆಂಟ್​ ಪಡೀತಾರೆ ಎಂಬ ಆರೋಪಗಳ ಮಧ್ಯೆಯೇ ಮಿಜೋರಾಂನ ಕೊರೊನಾ ಸೋಂಕಿತ ಸಚಿವ ಆಸ್ಪತ್ರೆಯ ನೆಲವನ್ನ ಒರೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮಿಜೋರಾಂನ ಶಕ್ತಿ ಹಾಗೂ ವಿದ್ಯುತ್​ ಇಲಾಖೆ ಸಚಿವ ಆರ್​. ಲಾಲ್​ಜಿರ್ಲಿಯಾನಾ ಆಸ್ಪತ್ರೆಯ ನೆಲ ಒರೆಸುತ್ತಿರುವ ದೃಶ್ಯ ವೈರಲ್ ಆಗಿದೆ.

ಲಾಲ್​ಜಿರ್ಲಿಯಾನಾರ ಪತ್ನಿ ಹಾಗೂ ಪುತ್ರ ಕೂಡ ಇದೇ ಆಸ್ಪತ್ರೆಯಲ್ಲಿ ಕೋವಿಡ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ ಲಾಲ್​ಜಿರ್ಲಿಯಾನ ಈ ರೀತಿ ನೆಲ ಒರೆಸುತ್ತಿರುವ ದೃಶ್ಯ ವೈರಲ್​ ಆಗಿರೋದು ಇದೇ ಮೊದಲೇನಲ್ಲ. ಮನೆ ಸೇರಿದಂತೆ ವಿವಿಧ ಕಡೆಯಲ್ಲೂ ನೆಲ ಒರೆಸುವ ಕೆಲಸವನ್ನ ಲಾಲ್​ ಮಾಡಿದ್ದಾರೆ.

ನರ್ಸ್​ ಹಾಗೂ ವೈದ್ಯರಿಗೆ ಮುಖಭಂಗ ಮಾಡಬೇಕು ಅಂತಾ ನಾನು ಈ ರೀತಿ ನೆಲವನ್ನ ಒರೆಸಲಿಲ್ಲ. ಬದಲಾಗಿ ಇತರರಿಗೆ ಒಂದು ಉದಾಹರಣೆಯಾಗಿ ನಿಲ್ಲಬೇಕು ಎಂದು ಈ ರೀತಿ ಮಾಡಿದೆ ಅಂತಾ ಲಾಲ್​​ಜಿರ್ಲಿಯಾ ಹೇಳಿದ್ದಾರೆ.

ತಾವಿದ್ದ ಕೊಠಡಿಯ ನೆಲ ಒರೆಸುವಂತೆ ಕೆಲಸಗಾರರಿಗೆ ಲಾಲ್​ ಸೂಚನೆ ನೀಡಿದ್ದರು. ಆದರೆ ನೆಲ ಒರೆಸುವವರಿಗೆ ಕೊಠಡಿಗೆ ಬರಲು ಸಾಧ್ಯವಾಗದ ಹಿನ್ನೆಲೆ ತಾವೇ ನೆಲ ಒರೆಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...