alex Certify BIG NEWS: ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ – ಯುವತಿ ತಂದೆಗೆ ಜಿಲ್ಲಾಧಿಕಾರಿ ಬೆದರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ – ಯುವತಿ ತಂದೆಗೆ ಜಿಲ್ಲಾಧಿಕಾರಿ ಬೆದರಿಕೆ

മാധ്യമങ്ങൾ കുറച്ച് ദിവസം കഴിഞ്ഞാൽ തിരികെ പോകും; ഹഥ് രസ് പെൺകുട്ടിയുടെ  കുടുംബത്തിന് ജില്ല മജിസ് ട്രേറ്റി െൻറ ഭീഷണി | Media will leave after few  days, we ...

ಹತ್ರಾಸ್: ಮಾಧ್ಯಮಗಳು ಇವತ್ತು ಇರುತ್ತವೆ. ನಾಳೆ ಹೊರಟು ಹೋಗುತ್ತವೆ. ನಾವು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ಹೇಳಿಕೆಯನ್ನು ಬದಲಿಸಿ ಎಂದು ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷರ್ ಅವರು ಮೃತ ಯುವತಿ ತಂದೆಗೆ ಬೆದರಿಕೆ ಹಾಕಿದ್ದಾರೆ.

ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ 19 ವರ್ಷದ ದಲಿತ ಯುವತಿ ಕುಟುಂಬ ಸದಸ್ಯರಿಗೆ ಪ್ರವೀಣ್ ಕುಮಾರ್ ಬೆದರಿಕೆ ಹಾಕಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಯುವತಿಯ ಮೃತದೇಹವನ್ನು ಕುಟುಂಬ ಸದಸ್ಯರಿಗೂ ಕೊಡದೆ ಪೊಲೀಸರೇ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಸರ್ ಸಂತ್ರಸ್ತೆಯ ತಂದೆಗೆ ಬೆದರಿಕೆ ಹಾಕಿ, ನಿಮ್ಮ ಹೇಳಿಕೆಯನ್ನು ಬದಲಿಸಿ. ನಿಮ್ಮ ಹೇಳಿಕೆಯನ್ನು ಬದಲಿಸಿದರೆ ನಿಮ್ಮ ಜೊತೆಗೆ ಇರುತ್ತೇನೆ. ಇಲ್ಲದಿದ್ದರೆ ನಿಮ್ಮ ಇಷ್ಟ ಎಂದು ಬೆದರಿಕೆ ಹಾಕಿದ್ದಾರೆ.

ಅರ್ಧದಷ್ಟು ಮಾಧ್ಯಮದವರು ಈಗಾಗಲೇ ಹೊರಟು ಹೋಗಿದ್ದಾರೆ. ಉಳಿದ ಅರ್ಧ ಮಂದಿ ನಾಳೆ ಹೊರಟು ಹೋಗುತ್ತಾರೆ. ನಾವು ಮಾತ್ರ ನಿಮ್ಮ ಜೊತೆಗೆ ನಿಲ್ಲುತ್ತೇವೆ. ನಿಮ್ಮ ಹೇಳಿಕೆಯನ್ನು ಬದಲಿಸಲು ಬಯಸುತ್ತೇವೆ. ಅದು ನಿಮಗೆ ಬಿಟ್ಟ ವಿಚಾರ ಎಂದು ಬೆದರಿಕೆ ರೂಪದಲ್ಲಿ ಮಾತನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...