ಇಂದೋರ್: ಮಾಸ್ಕ್ ಇಲ್ಲದ ಕಾರಣಕ್ಕಾಗಿ ಐಷಾರಾಮಿ ಕಾರಿನಲ್ಲಿ ಬಂದ ಯುವಕನಿಗೆ ಪೊಲೀಸರು ಬಸ್ಕಿ ಹೊಡೆಸಿದ ಘಟನೆ ಇಂದೋರ್ ಸುಖಾಲಿಯಾ ಪ್ರದೇಶದಲ್ಲಿ ನಡೆದಿದೆ.
ಹಳದಿ ಬಣ್ಣದ ಐಶಾರಾಮಿ ಕಾರಿನಲ್ಲಿ ರಸ್ತೆಗೆ ಬಂದಿದ್ದ ಯುವಕನನ್ನು ಪೊಲೀಸರು ತಡೆದಿದ್ದಾರೆ. ಆತ ತನ್ನ ಬಳಿ ಕರ್ಫ್ಯೂ ಪಾಸ್ ಇದೆ. ಆಹಾರ ಸಾಮಗ್ರಿ ತರಲು ಹೋಗುತ್ತಿದ್ದೇನೆ ಎಂದು ಹೇಳಿದರೂ ಕೇಳದೇ ಬಸ್ಕಿ ಹೊಡೆಯಲು ಸೂಚಿಸಿದ್ದಾರೆ.
ಯುವಕ ತನ್ನ ಕಿಸೆಯಲ್ಲಿದ್ದ ಮಾಸ್ಕ್ ಹಾಕಿಕೊಳ್ಳಲು ಮುಂದಾದಾಗ ನೀನು ಮಾಸ್ಕ್ ಅನ್ನು ಏನು ನಿನ್ನ ಮದುವೆ ದಿನ ಹಾಕಲು ಇಟ್ಟುಕೊಂಡಿದ್ದೀಯಾ ಎಂದು ಪ್ರಶ್ನಿಸಿದ್ದಾರೆ.
ಬಸ್ಕಿ ಹೊಡೆಸಿದ ನಂತರ ಯುವಕ ವಿವರಣೆ ಕೊಡಲು ಹೋದರೂ ಪೊಲೀಸರು ಕೇಳುವ ಮೂಡ್ ತೋರಿಸಿಲ್ಲ