alex Certify ಕೊನೆಗೂ ನಿಜವಾಯ್ತು ಪ್ರಶಾಂತ್​ ಕಿಶೋರ್​ ಚುನಾವಣಾ ಫಲಿತಾಂಶದ ಭವಿಷ್ಯ: ಟ್ವೀಟ್​ ಆಯ್ತು ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ನಿಜವಾಯ್ತು ಪ್ರಶಾಂತ್​ ಕಿಶೋರ್​ ಚುನಾವಣಾ ಫಲಿತಾಂಶದ ಭವಿಷ್ಯ: ಟ್ವೀಟ್​ ಆಯ್ತು ವೈರಲ್​

ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಮಾಸ್ಟರ್​ ಪ್ಲ್ಯಾನರ್​ ಆಗಿದ್ದ ಪ್ರಶಾಂತ್​ ಕಿಶೋರ್​ ತಾವು ಚುನಾವಣಾ ಚಾಣಕ್ಯ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ನಡುವೆ ಟ್ವಿಟರ್​ ಹಾಗೂ ಇತರೆ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಪ್ರಶಾಂತ್​ ಕಿಶೋರ್​ ಈ ಹಿಂದೆ ಮಾಡಿದ್ದ ಟ್ವೀಟ್​ ಒಂದು ವೈರಲ್​ ಆಗಿದೆ.

ಕಳೆದ ವರ್ಷ ಡಿಸೆಂಬರ್​ 21ರಂದು ಮಾಡಿದ್ದ ಪ್ರಶಾಂತ್​​​ ಕಿಶೋರ್​ ಟ್ವೀಟ್​ ಇದೀಗ ವ್ಯಾಪಕವಾಗಿ ಶೇರ್​ ಆಗುತ್ತಿದೆ. ಈ ಟ್ವೀಟ್​ನಲ್ಲಿ ಪ್ರಶಾಂತ್​ ಕಿಶೋರ್​ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಎರಡಂಕಿ ದಾಟಲೂ ಹೆಣಗಾಡಲಿದೆ ಎಂದು ಹೇಳಿದ್ದರು.

ಅಲ್ಲದೇ ಒಂದು ವೇಳೆ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಎರಡಂಕಿ ದಾಟಲು ಯಶಸ್ವಿಯಾದಲ್ಲಿ ತಾವು ಟ್ವಿಟರ್​ನ್ನು ತ್ಯಜಿಸೋದಾಗಿ ಹೇಳಿದ್ದರು. ಈ ಟ್ವೀಟ್​ ಇದೀಗ 62 ಸಾವಿರಕ್ಕೂ ಹೆಚ್ಚು ಲೈಕ್ಸ್​ ಹಾಗೂ 14 500 ರಿಟ್ವೀಟ್​ಗಳನ್ನ ಸಂಪಾದಿಸಿದೆ.

ಇದೀಗ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ನೋಡಿದ ಅನೇಕರು ಪ್ರಶಾಂತ್​ ಕಿಶೋರ್​ ಈ ಟ್ವೀಟ್​ನ್ನು ಜ್ಞಾಪಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಫಲಿತಾಂಶದಲ್ಲಿ ಮೊದಲು ಬಿಜೆಪಿ ನೂರಕ್ಕೂ ಹೆಚ್ಚು ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದ ವೇಳೆ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಿದ ಬಳಿಕ ದೇಶವು ಚುನಾವಣಾ ತಂತ್ರಜ್ಞನನ್ನ ಕಳೆದುಕೊಳ್ಳೋದನ್ನ ನಾವು ನೋಡಲಿದ್ದೇವೆ ಎಂದು ಬಿಜೆಪಿ ನಾಯಕ ಕೈಲಾಶ್​​ ವಿಜಯವರ್ಗೀಯ ಹೇಳಿದ್ದರು.

ಆದರೆ ಇದೀಗ ಬಿಜೆಪಿಯು ಎರಡಂಕಿ ದಾಟುವಲ್ಲಿ ವಿಫಲವಾಗಿದ್ದು ಪ್ರಶಾಂತ್​ ಕಿಶೋರ್​​ರ ಈ ಭವಿಷ್ಯ ನಿಜವಾಗಿದೆ ಎಂದು ಅನೇಕರು ಹಾಡಿ ಹೊಗಳಿದ್ದಾರೆ.
ಆದರೆ ಟಿಎಂಸಿಯ ವಿಜಯಕ್ಕೆ ಕಾರಣರಾದ ಪ್ರಶಾಂತ್​ ಕಿಶೋರ್​​ ಚುನಾವಣ ತಂತ್ರಜ್ಞ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಪ್ರಶಾಂತ್ ಕಿಶೋರ್, ನಾನು ಈಗ ಮಾಡುತ್ತಿರುವ ಕೆಲಸದಲ್ಲಿ ನನಗೆ ಮುಂದುವರಿಯಲು ಇಷ್ಟವಿಲ್ಲ. ನಾನು ಸಾಕಷ್ಟು ಮಾಡಿದ್ದೇನೆ. ಇದೀಗ ನಾನು ವಿರಾಮ ಪಡೆಯಲು ನಿರ್ಧರಿಸಿದ್ದೇನೆ. ಹೀಗಾಗಿ ನಾನು ಈ ಜಾಗದಿಂದ ನಿರ್ಗಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

— Azhar Jafri (@zhr_jafri) May 2, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...