alex Certify ಬೇಟೆಯಾಡಲು ಹೋದಾಗಲೇ ದುರಂತ: ಸ್ನೇಹಿತನ ಸಾವಿಗೆ ನೊಂದು ಆತ್ಮಹತ್ಯೆಗೆ ಶರಣಾದ ಮೂವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಟೆಯಾಡಲು ಹೋದಾಗಲೇ ದುರಂತ: ಸ್ನೇಹಿತನ ಸಾವಿಗೆ ನೊಂದು ಆತ್ಮಹತ್ಯೆಗೆ ಶರಣಾದ ಮೂವರು

ಕಾಡಿನಲ್ಲಿ ಬೇಟೆಯಾಡುತ್ತಿದ್ದ ವೇಳೆ ಯುವಕನೊಬ್ಬ ಗುಂಡೇಟಿಗೆ ಬಲಿಯಾದರೆ ಉಳಿದ ಮೂವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ದಾರುಣ ಘಟನೆ ಉತ್ತರಾಖಂಡ್​​ನ ತೆಹ್ರಿ ಜಿಲ್ಲೆಯ ಕುಂದಿ ಗ್ರಾಮದಲ್ಲಿ ನಡೆದಿದೆ.

ಬೇಟೆಯಾಡುತ್ತಿದ್ದ ವೇಳೆ ಅಕಸ್ಮಾತ್​ ಆಗಿ ಗುಂಡು ತಾಕಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಇದರಿಂದ ಪಶ್ಚಾತಾಪಪಟ್ಟ ಉಳಿದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್​ಡಿಎಂ ಪಿಆರ್​​ ಚೌಹಾಣ್​ ಹೇಳಿದ್ದಾರೆ.

ಭಿಲಂಗಣಾ ಬ್ಲಾಕ್​ನಿಂದ 7 ಮಂದಿ ಸ್ನೇಹಿತರು ಶನಿವಾರ ಬೇಟೆಯಾಡಲು ಕಾಡಿಗೆ ತೆರಳಿದ್ದರು ಎನ್ನಲಾಗಿದೆ. ಇದರಲ್ಲಿ ಬಂದೂಕನ್ನ ಹೊಂದಿದ್ದ 22 ವರ್ಷದ ರಾಜೀವ್​ ಈ ತಂಡದ ನೇತೃತ್ವವನ್ನ ವಹಿಸಿದ್ದ. ಈತ ಕಾಲು ಜಾರಿ ನೆಲಕ್ಕೆ ಬಿದ್ದಿದ್ದು ಈ ವೇಳೆ ಅರಿವಿಲ್ಲದೇ ಈತ ಬಂದೂಕಿನ್ ಟ್ರಿಗರ್​ನ್ನು ಒತ್ತಿದ್ದಾನೆ.

ಈ ವೇಳೆ ಬಂದೂಕಿನಲ್ಲಿದ್ದ ಗುಂಡು ಸಂತೋಷ್ ಎಂಬಾತನನ್ನ ಸೀಳಿದೆ. ರಕ್ತದ ಮಡುವಿನಲ್ಲಿ ಸಂತೋಷ್​ ಬಿದ್ದಿದ್ದನ್ನ ಕಂಡು ಆತನ ಸ್ನೇಹಿತರು ಭಯಗೊಂಡಿದ್ದಾರೆ.

ರಾಜೀವ್​ ಬಂದೂಕಿನ ಸಮೇತ ನಾಪತ್ತೆಯಾಗಿದ್ದರೆ, ಸೋಬನ್​, ಪಂಕಜ್​ ಹಾಗೂ ಅರ್ಜುನ್​ ಎಂಬವರು ಈ ಘಟನೆಯಿಂದ ಮನನೊಂದು ಕೀಟನಾಶಕ ಸೇವಿಸಿದ್ದಾರೆ. ಇದೇ ಬಳಗದಲ್ಲಿದ್ದ ರಾಹುಲ್​ ಹಾಗೂ ಸುಮಿತ್​ ಹಳ್ಳಿಗೆ ವಾಪಸ್ಸಾಗಿದ್ದು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಕೂಡಲೇ ಗ್ರಾಮಸ್ಥರು ಕೀಟನಾಶಕ ಸೇವಿಸಿದ್ದ ಮೂವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಹೊತ್ತಿಗಾಗಲೇ ಪಂಕಜ್​ ಹಾಗೂ ಅರ್ಜುನ್ ಸಾವನ್ನಪ್ಪಿದ್ದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಬನ್​ ಕೂಡ ಮೃತಪಟ್ಟಿದ್ದಾನೆ. ಈ ಎಲ್ಲಾ ಯುವಕರು 18 ರಿಂದ 22 ವರ್ಷ ಪ್ರಾಯದವರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...