alex Certify ಮಹಿಳೆ ಸಾವಿಗೆ ಕಾರಣವಾಯ್ತು ಮಾವಿನ ಹಣ್ಣಿನ ಜಗಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಸಾವಿಗೆ ಕಾರಣವಾಯ್ತು ಮಾವಿನ ಹಣ್ಣಿನ ಜಗಳ

ಮಾವಿನಹಣ್ಣಿನ ವಿಚಾರವಾಗಿ ಜಗಳ ನಡೆದು ಪತಿ ತನ್ನ ಪತ್ನಿಯನ್ನು ಬಡಿದು ಕೊಂದು ಹಾಕಿದ ಘಟನೆ ಒಡಿಶಾದ ಜಲ ಮುಂಡ ಗ್ರಾಮದಲ್ಲಿ ನಡೆದಿದೆ.

ಆರೋಪಿ ಕಾರ್ತಿಕ್ ಜನ ಎಂಬಾತ ತಡರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಆಗಮಿಸಿ ಮಾವಿನಹಣ್ಣು ಕೊಡುವಂತೆ ಪತ್ನಿಗೆ ಪೀಡಿಸಿದ್ದಾನೆ. ಆದರೆ ಮಕ್ಕಳು ಹಣ್ಣು ತಿಂದಿದ್ದಾರೆ ಎಂದು ಪತ್ನಿ ಉತ್ತರಿಸಿದರೂ ಸಮಾಧಾನಗೊಂಡಿಲ್ಲ. ಕೆರಳಿದ ಆರೋಪಿಯು ಬಿದಿರಿನ ಹಲಗೆಯಿಂದ ಆಕೆಗೆ ಮನಸೋ ಇಚ್ಛೆ ಭಾರಿಸಿದ್ದಾನೆ.

ಆಕೆ ಕಿರುಚಾಟ ದಿಂದ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಾಗ, ಮಹಿಳೆ ಪ್ರಜ್ಞಾ ಶೂನ್ಯವಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ಇಹಲೋಕ ತ್ಯಜಿಸಿದ್ದಳು.

ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಪ್ರಗತಿಯಲ್ಲಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...