alex Certify ಕಛೇರಿಗೆ ಕುದುರೆ ಮೇಲೆ ಬರಲು ಅನುಮತಿ ಕೋರಿ ಪತ್ರ ಬರೆದ ನೌಕರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಛೇರಿಗೆ ಕುದುರೆ ಮೇಲೆ ಬರಲು ಅನುಮತಿ ಕೋರಿ ಪತ್ರ ಬರೆದ ನೌಕರ…!

ಮಹಾರಾಷ್ಟ್ರದ ನಾಂದೇಡ್​ನ ಸರ್ಕಾರಿ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿಯ ಬಳಿ ಕಚೇರಿಯ ಪಾರ್ಕಿಂಗ್​ ಏರಿಯಾದಲ್ಲಿ ಕುದುರೆಯನ್ನ ನಿಲ್ಲಿಸೋಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಈ ಅಧಿಕಾರಿಯ ಬೆನ್ನು ಮೂಳೆಯಲ್ಲಿ ಸಮಸ್ಯೆಯಿರೋದ್ರಿಂದ ದ್ವಿಚಕ್ರ ವಾಹನದ ಮೇಲೆ ಪ್ರಯಾಣ ಮಾಡೋದು ಕಷ್ಟವಾಗಿದೆ.

ಹೀಗಾಗಿ ಕುದುರೆಯಲ್ಲೇ ಕಚೇರಿಗೆ ಬರಬೇಕು ಎಂದುಕೊಂಡಿರುವ ನನಗೆ ಇದನ್ನ ಪಾರ್ಕ್​ ಮಾಡೋಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

ನಾಂದೇಡ್​ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ಖಾತರಿ ಯೋಜನೆ ವಿಭಾಗದಲ್ಲಿ ಸಹಾಯಕ ಲೆಕ್ಕ ಪರಿಶೋಧಕರಾಗಿರುವ ಸತೀಶ್​ ದೇಶಮುಖ್​ ಇಂತಹದ್ದೊಂದು ವಿಚಿತ್ರ ಮನವಿಯನ್ನ ಜಿಲ್ಲಾಧಿಕಾರಿಗಳ ಮುಂದಿಟ್ಟಿದ್ದಾರೆ.

ಸತೀಶ್​ ದೇಶಮುಖ್​ರ ಮನವಿ ಸ್ವೀಕರಿಸಿದ ಉಪ ಸಂಗ್ರಾಹಕ ಪ್ರದೀಪ್​ ಕುಲಕರ್ಣಿ, ಈ ವಿಚಾರವಾಗಿ ಮೂಳೆ ತಜ್ಞರ ಬಳಿ ವೈದ್ಯಕೀಯ ಸಲಹೆಯನ್ನ ಕೇಳಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್​ ಆಗಿರುವ ಡಾ. ಶಂಕರ್​ರಾವ್​ ಚವಾಣ್​​ ದೇಶ್​ಮುಖ್​ ಕುದುರೆ ಸವಾರಿ ಮಾಡಿದ್ರೆ ಬೆನ್ನು ಮೂಳೆ ಸಮಸ್ಯೆ ಮತ್ತಷ್ಟು ಉಲ್ಬಣವಾಗಬಹುದು ಎಂದು ಹೇಳಿದ್ದಾರೆ.‌

ನನಗೆ ಬೆನ್ನುಹುರಿಯಲ್ಲಿ ಕೆಲ ಸಮಸ್ಯೆ ಇದೆ. ಹೀಗಾಗಿ ನನಗೆ ದ್ವಿಚಕ್ರವಾಹನದ ಮೂಲಕ ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾನೊಂದು ಕುದುರೆಯನ್ನ ಖರೀದಿಸಿ ಅದರ ಮೇಲೆಯೇ ಆಫೀಸ್​ಗೆ ಬರಬೇಕು ಎಂದುಕೊಂಡಿದ್ದೇನೆ. ಹೀಗಾಗಿ ತಾವು ಕುದುರೆಯನ್ನ ಕಟ್ಟಲು ಅವಕಾಶ ನೀಡಿ ಎಂದು ಅರ್ಜಿಯಲ್ಲಿ ಬರೆದಿದ್ದರು. ಸಂಜೆ ಈ ಪತ್ರವನ್ನ ಸತೀಶ್​ ವಾಪಸ್ ಪಡೆದದ್ದು ಮಾತ್ರವಲ್ಲದೇ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...