alex Certify ಹಣ ಡ್ರಾ ಮಾಡಲು ಬ್ಯಾಂಕ್‌ ಮುಂದೆ ರಾತ್ರಿಯೆಲ್ಲಾ ಕಾದು ನಿಂತ ರೈತರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಡ್ರಾ ಮಾಡಲು ಬ್ಯಾಂಕ್‌ ಮುಂದೆ ರಾತ್ರಿಯೆಲ್ಲಾ ಕಾದು ನಿಂತ ರೈತರು..!

ತಮ್ಮ ಖಾತೆಯಿಂದ ಹಣ ಡ್ರಾ ಮಾಡುವ ಸಲುವಾಗಿ ರೈತರು ರಾತ್ರಿಪೂರ್ತಿ ಬ್ಯಾಂಕ್​ ಎದುರು ಸರತಿ ಸಾಲಿನಲ್ಲಿ ನಿಂತ ಘಟನೆ ಮಧ್ಯ ಪ್ರದೇಶದ ವಿದಿಷಾ ಎಂಬಲ್ಲಿ ನಡೆದಿದೆ. ಬ್ಯಾಂಕ್​ನ ಸಿಬ್ಬಂದಿಗೆ ಕೊರೊನಾ ವೈರಸ್​ ಬಂದಿದ್ದರಿಂದ 2 ವಾರಗಳ ಕಾಲ ಈ ಬ್ಯಾಂಕ್​ನ್ನು ಕ್ಲೋಸ್​ ಮಾಡಲಾಗಿತ್ತು.

ಬ್ಯಾಂಕ್​​ನಲ್ಲಿ ಜನಸಂದಣಿಯನ್ನ ತಪ್ಪಿಸುವ ಸಲುವಾಗಿ ಪ್ರತಿದಿನ 150 ಟೋಕನ್​ಗಳನ್ನ ವಿತರಣೆ ಮಾಡುವ ಮೂಲಕ ಟೋಕನ್​ ಆಧಾರದಲ್ಲಿ ಗ್ರಾಹಕರಿಗೆ ಸೇವೆಯನ್ನ ನೀಡಲಾಗ್ತಿದೆ.

ಹೀಗಾಗಿ ಅನೇಕ ರೈತರು ಬ್ಯಾಂಕ್​ ಆವರಣದಲ್ಲೇ ಬಟ್ಟೆ ಹಾಸಿಕೊಂಡು ಮಲಗಿ ತಮ್ಮ ಸರದಿಗಾಗಿ ಕಾದಿದ್ದಾರೆ. ಇನ್ನೂ ಕೆಲವರು ಉದ್ದನೆಯ ಸಾಲಿನಲ್ಲಿ ತಮ್ಮ ಜಾಗವನ್ನ ಗುರುತಿಸಿಕೊಳ್ಳಲು ಕಲ್ಲುಗಳನ್ನ ಇಟ್ಟಿದ್ದಾರೆ.

ಹಣವನ್ನ ಡ್ರಾ ಮಾಡಲು ಟೋಕನ್​ ಪಡೆಯಬೇಕಾಗಿದ್ದರಿಂದ ರೈತರು ಈ ರೀತಿ ರಾತ್ರಿಯೆಲ್ಲ ಬ್ಯಾಂಕ್​ ಎದುರು ಕಾದಿದ್ದಾರೆ. ಈಗಾಗಲೇ 150 ಟೋಕನ್​ ವಿತರಿಸಲಾಗಿದ್ದು ಮಿಕ್ಕವರಿಗೆ ನಾಳೆ ಅವಕಾಶ ಸಿಗಲಿದೆ ಅಂತಾ ತಹಶೀಲ್ದಾರ್​ ಮಾಹಿತಿ ನೀಡಿದ್ರು.

ಇಲ್ಲಿ ಸರದಿಯಲ್ಲಿ ಕಾಯುತ್ತಿರುವ ಅನೇಕರ ಕೈಯಲ್ಲಿ ಡೀಸೆಲ್​ ಖರೀದಿ ಮಾಡಲು ಹಾಗೂ ರಸಗೊಬ್ಬರ ಖರೀದಿಗೂ ಹಣವಿರಲಿಲ್ಲ. ಇನ್ನೂ ಕೆಲವರು ತಮ್ಮ ಮಕ್ಕಳ ಮದುವೆಗಾಗಿ ಹಣ ಡ್ರಾ ಮಾಡಲು ಆಗಮಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...