alex Certify ಭೋಪಾಲ್​ ಅನಿಲ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೋಪಾಲ್​ ಅನಿಲ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​

1984ರ ಭೂಪಾಲ್​ ಅನಿಲ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಸ್ಮಾರಕವನ್ನ ನಿರ್ಮಿಸಲಾಗುವುದು ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ.

ವಿಷಕಾರಿ ಅನಿಲ ಸೋರಿಕೆ ದುರಂತಕ್ಕೆ 36 ವರ್ಷ ತುಂಬಿದ ಪ್ರಯುಕ್ತ ದುರಂತದಲ್ಲಿ ಪತಿಯನ್ನ ಕಳೆದುಕೊಂಡ ವಿಧವೆಯರಿಗೆ 1 ಸಾವಿರ ರೂಪಾಯಿಗಳ ಪಿಂಚಣಿ ಪುನಾರಂಭಿಸೋದಾಗಿ ಚೌಹಾಣ್​ ಘೋಷಿಸಿದ್ದಾರೆ.

1984ರ ಡಿಸೆಂಬರ್​​ 2 ಹಾಗೂ 3ನೇ ತಾರೀಖಿನಂದು ಕೀಟನಾಶಕ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದಾಗಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲಾಗುವುದು. ಅಲ್ಲದೇ ದುರಂತದಲ್ಲಿ ಸಾವಿಗೀಡಾದ ವಿಧವೆಯರಿಗೆ 2019ರಲ್ಲಿ ನೀಡಲಾಗುತ್ತಿದ್ದ ಪಿಂಚಣಿ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ನಗರದ ಹೊರವಲಯದಲ್ಲಿರುವ ಯೂನಿಯನ್​ ಕಾರ್ಬೈಡ್​ ಇಂಡಿಯಾ ಲಿಮಿಟೆಡ್​ ಕೀಟನಾಶಕ ಘಟಕದಿಂದ 1984ರ ಡಿಸೆಂಬರ್​ ಮಧ್ಯರಾತ್ರಿ ಮಿಥೈಲ್​ ಐಸೋಸೈನೇಟ್​​ ಸೋರಿಕೆಯಿಂದಾಗಿ 15 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...